Slide
Slide
Slide
previous arrow
next arrow

ಚಿಕ್ಕ ಮಕ್ಕಳ ತಾಯಂದಿರರಿಗೆ ಚುನಾವಣೆ ಕರ್ತವ್ಯಕ್ಕೆ ಆದೇಶ : ಅನುಕಂಪದ ರಿಯಾಯಿತಿ ಯಾಕಿಲ್ಲ..?

300x250 AD

ಹೊನ್ನಾವರ : ಚುನಾವಣಾ ಕಾರ್ಯಗಳಲ್ಲಿ ಗಣನೀಯವಾಗಿ ಮಹಿಳಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗು­ತ್ತದೆ. ಎಲ್ಲ ಸರ್ಕಾರಿ, ಅರೆ­ಸರ್ಕಾರಿ ನೌಕರರ ಕಡ್ಡಾಯ ಕರ್ತವ್ಯ­ವಾಗಿ­ರು­ವುದ­ರಿಂದ ಯಾರೂ ಈ ಕೆಲಸವನ್ನು ನಿರಾ­ಕರಿಸುವಂತಿಲ್ಲ. ಮಹಿಳೆಯರಂತೂ ಈ ಕೆಲಸ­ವನ್ನು ನಿರ್ವಹಿ­ಸು­­ತ್ತಲೇ ಬರುತ್ತಿ­ದ್ದಾರೆ. ಆದರೆ ಚಿಕ್ಕ ಮಕ್ಕಳಿರುವ ತಾಯಂದಿರರಿಗೆ ರಿಯಾಯಿತಿ ಕೊಡದೆ ಇರುವುದು, ಆ ಸಮಯದಲ್ಲಿ ಅಂತಹ ಕುಟುಂಬಕ್ಕೆ ಮಗುವಿನ ಪಾಲನೆ ಮಾಡುವುದು ಕಷ್ಟದ ಕೆಲಸ ಆಗುತ್ತಿದೆ.

ಪ್ರತಿ ಬಾರಿಯೂ ಚುನಾವಣೆ ಬಂದಾಗ ವಿವಿಧ ಕಡೆಯಿಂದ ಮಹಿಳಾ ಸಿಬ್ಬಂದಿಗಳು ಚುನಾವಣೆ ಸಮಯದಲ್ಲಿ ಪಡುವ ಕಷ್ಟದ ಕೇಳುತ್ತಲೇ ಇರುತ್ತೇವೆ. ಒಂದು ಕೈಯಲ್ಲಿ ಮತಯಂತ್ರದ ಪೆಟ್ಟಿಗೆ, ಮತ್ತೊಂದು ಕೈಯಲ್ಲಿ ನಾನಾ ಆಟಿಕೆ ಹೊತ್ತಿರುವ ಮಹಿಳೆ. ಪತಿಯ ತೋಳಿನಲ್ಲಿದ್ದ ಮಗುವಿಗೆ ಬಾಳೆಹಣ್ಣು ತಿನ್ನಿಸುತ್ತಲೇ ಚುನಾವಣೆ ಕಾರ್ಯ ನಿರ್ವಹಣೆ, ಪೋಲಿಯೋ ಪೀಡಿತ ಮಗಳೊಂದಿಗೆ ಮತಗಟ್ಟೆಯತ್ತ ಹೊರಟ ತಾಯಿ, ಮಗುವನ್ನು ಸಂತೈಸುತ್ತಲೇ ಪತ್ನಿಯನ್ನು ಕಳುಹಿಸಿದ ಪತಿ ಹೀಗೆ ಹಲವು ಘಟನೆ ನಡೆಯುತ್ತಿದ್ದರು, ಚುನಾವಣೆಯಲ್ಲಿ ಇಂತವರಿಗೆ ರಿಯಾಯಿತಿ ಕೊಡುತ್ತಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಇಂತಹ ತಾಯಂದಿರರಿಗೆ ಚುನಾವಣೆ ಕರ್ತವ್ಯದಿಂದ ದೂರ ಇಡಬೇಕಿದೆ.

ಕೆಲವು ಸರಕಾರಿ ನೌಕರರಲ್ಲಿ ಪತಿ, ಪತ್ನಿ ಇಬ್ಬರನ್ನು ಚುನಾವಣೆ ಕರ್ತವ್ಯಕ್ಕೆ ನೇಮಕ ಮಾಡುತ್ತಾರೆ. ಕೆಲವರಿಗೆ ಕೌಟುಂಬಿಕ ಸಮಸ್ಯೆ ಇರುತ್ತದೆ. ಇವರನ್ನೇ ನಂಬಿದ ತಂದೆ, ತಾಯಿ, ಅಂಗವಿಕಲ ಮಕ್ಕಳು, ಅನಾರೋಗ್ಯ ಹೊಂದಿದವರು ಇರುವಂತವರಿಗೆ ಇಬ್ಬರಲ್ಲಿ ಒಬ್ಬರಿಗಾದರೂ ರಿಯಾಯಿತಿ ಕೊಡಬೇಕು ಎನ್ನುವ ಮನವಿ ಕೆಲವರಿಂದ ಕೇಳಿ ಬರುತ್ತಿದೆ. ಅದರ ಜೊತೆಗೆ ಕೆಲವು ಪ್ರಭಾವ ಇರುವ ನೌಕರರು, ತಮ್ಮ ಪ್ರಭಾವ ಬೆಳೆಸಿ, ಈ ಕೆಲಸದಿಂದ ನುಣುಚಿಕೊಳ್ಳುತ್ತಾರೆ. ಚುನಾವಣೆ ಕರ್ತವ್ಯಕ್ಕೆ ಹೋಗಲು ಸಾಕಷ್ಟು ಜನರು ಇದ್ದರು ಕೂಡ ಚಿಕ್ಕ ಮಕ್ಕಳು ಇರುವ ತಂದೆ ತಾಯಿಯನ್ನೇ ನೇಮಕ ಮಾಡುತ್ತಿರುವುದು ಕೆಲವು ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ.

ಪಟ್ಟಿ ಮಾಡಿ ವಿನಾಯ್ತಿ ಕೊಡಿ:ಹೆರಿಗೆ ರಜೆ ಪಡೆದವರನ್ನು ಪ್ರತ್ಯೇಕ ಪಟ್ಟಿ ಮಾಡಿ ವಿನಾಯಿತಿ ನೀಡಬೇಕು. ಅದನ್ನು ಬಿಟ್ಟು ಐದಾರು ತಿಂಗಳಿಂದ, ಎರಡು ವರ್ಷದ ಮಗುವಿರುವವರನ್ನೂ ಚುನಾವಣೆ ಕೆಲಸಕ್ಕೆ ನಿಯೋಜಿಸಿರುವುದು ಸರಿಯಲ್ಲ.

ಶಾಲೆಗಳಲ್ಲಿ ಧೂಳೂ ಹೊಡೆಯುವವರೂ ಇಲ್ಲ:
ಹಲವೆಡೆ ಶಾಲೆಗಳಲ್ಲಿ ಮತಗಟ್ಟೆಗಳನ್ನು ರಚಿಸಿದೆ. ಆದರೆ, ಶಾಲೆಗಳಿಗೆ ಬೇಸಿಗೆ ರಜೆ ನೀಡಿರುವ ಸಮಯದಲ್ಲಿ ಅಲ್ಲಿ ನಿತ್ಯ ಕಸ ಗುಡಿಸಿ ಶುಚಿ ಮಾಡುವರೂ ಇಲ್ಲ. ಮತಯಂತ್ರಗಳನ್ನು ತೆಗೆದುಕೊಂಡು ಹೋದ ಸಿಬ್ಬಂದಿಯೇ ಮತಗಟ್ಟೆಗಳಲ್ಲಿ ಕಸ ಹೊಡೆದು, ತೊಳೆದು ಶುಚಿ ಮಾಡಿದಂತಹ ಪ್ರಸಂಗಗಳು ಈ ಹಿಂದೆ ನಡೆದಿದೆ.

ನಮ್ಮ ಹಳ್ಳಿಗಳು ಇನ್ನೂ ಕೆಲವು ಕಡೆ ಮೂಲ­­ಸೌಲಭ್ಯಗಳಿಂದ ವಂಚಿತ­ವಾ­ಗಿದ್ದು ಮಹಿಳಾ ವಾಸಕ್ಕೆ ಯೋಗ್ಯ­ವಾ­ಗಿಲ್ಲದಿರುವುದೇ ತಲೆ­ನೋವಿನ ಸಂಗತಿಯಾಗಿದೆ. ಗ್ರಾಮಾಂತರದ ಮತಗಟ್ಟೆ­ಗಳಲ್ಲಿ ರಾತ್ರಿ ತಂಗಲು ಮಹಿಳೆಯರಿಗೆ ಸುರಕ್ಷಿ­ತತೆ ಎಂಬುದೇ ಇಲ್ಲ. ಸಾಮಾನ್ಯ­ವಾಗಿ ಶಾಲಾ–ಕಾಲೇಜು ಅಥವಾ ಸಮು­ದಾಯ ಭವನ­ಗಳನ್ನು ಮತಗಟ್ಟೆ­ಗಳಾಗಿ ಗುರುತಿಸಲಾಗಿರುತ್ತದೆ.

300x250 AD

ಆ ಕಟ್ಟ­ಡ­ಗ­ಳಲ್ಲಿ ನಗರ, ಜಿಲ್ಲಾ ಕೇಂದ್ರಗಳನ್ನು ಹೊರತು ಪಡಿಸಿ ಉಳಿದೆಡೆ ವಿದ್ಯುತ್ ದೀಪ, ಕೋಣೆಗಳಿಗೆ ಬಾಗಿಲು, ಚಿಲಕ, ಕುಡಿಯುವ ನೀರು ಮುಂತಾಗಿ ಯಾವ ಸೌಲಭ್ಯಗಳೂ ಇರುವುದಿಲ್ಲ. ಚುನಾ­ವಣೆ ತುಂಬಾ ಸೂಕ್ಷ್ಮವಾದ ಸಂದರ್ಭ ಬೇರೆ. ಯಾರ ಮನೆಗೂ ಹೋಗುವಂತಿಲ್ಲ. ಆಡಳಿತದಲ್ಲಿ ಮನೆ ಮಾಡಿ­­ಕೊಂಡಿರುವ ಭ್ರಷ್ಟತೆ ಕಾರಣ­ವಾಗಿ ಜನತೆಯಲ್ಲಿ ಸರ್ಕಾರ ಅಥವಾ ಸರ್ಕಾರಿ ಯಂತ್ರದ ಬಗ್ಗೆ ಪೂರ್ವ­ಗ್ರಹ­ಪೀಡಿತ ದೃಷ್ಟಿಗಳು ತುಂಬಿ­ಕೊಂಡಿ­ವೆ. ಹೀಗಾಗಿ ಚುನಾವಣಾ ಸಿಬ್ಬಂದಿ ಬಗೆಗೂ ತಿರಸ್ಕಾರ, ಗುಮಾನಿ, ನಿರ್ಲಕ್ಷ್ಯ ವಿಜೃಂಭಿಸು­ತ್ತವೆ.

ಇಂಥ ಪರಿಸ್ಥಿತಿಯಲ್ಲಿ ಮಹಿಳೆಯರು ಮೂಲ ಸೌಲಭ್ಯಗಳಿ­ಗಾಗಿ ಹಳ್ಳಿಗಳಲ್ಲಿ ಯಾರನ್ನೂ ಕೇಳುವಂತಿಲ್ಲ. ಚುನಾವಣಾ ಮುನ್ನಾ ದಿನವೇ ಬೆಳ­ಗಿನ ಜಾವ ೭ ಗಂಟೆಗೆ ಕರ್ತವ್ಯಕ್ಕೆ ಹಾಜ­ರಾಗಿ ತಮ್ಮ ಸರದಿಗಾಗಿ ಕಾದು ಕೂಡ­ಬೇಕು ಅಲ್ಲಿಯೂ ಶೌಚಾಲಯ­ವಿರು­ವುದಿಲ್ಲ. ಅಲ್ಲಿಂದಲೆ ನಿಯೋಜಿಸಲಾದ ಹಳ್ಳಿ, ತಾಂಡಾ, ಕಗ್ಗಾಡು ಎಲ್ಲೆಲ್ಲಿಯೋ ರಸ್ತೆ ಇಲ್ಲದ ಕಡೆಯೂ ತೆರಳಬೇಕು. ಮತಗಟ್ಟೆಗೆ ತಲುಪಲು ಸಾಯಂಕಾಲ ಆಗಬಹುದು. ರಾತ್ರಿ ಕತ್ತಲಲ್ಲೂ ಚುನಾ­ವಣಾ ಪ್ರಕ್ರಿಯೆ­ಗಾಗಿ ಮತಗಟ್ಟೆ ಸಿದ್ಧ­ಪಡಿಸಿಕೊಳ್ಳಬೇಕು. ಬೆಳಗಿನ ಜಾವ ೬ ಗಂಟೆಯಿಂದಲೇ ಕೆಲಸಕ್ಕೆ ಶುರುಹಚ್ಚಿ­ಕೊಳ್ಳಬೇಕು.

ನಿಗದಿತ ಅವಧಿಯವರೆಗೆ ಎಲ್ಲ ಕೆಲಸ ಮುಗಿಸಿ ಮತಪೆಟ್ಟಿಗೆಯನ್ನು ಸಂಬಂಧ­ಪಟ್ಟ ಅಧಿಕಾರಿಗೆ ತಲುಪಿಸಿ ಎರ­ಡನೇ ದಿನ ಮಧ್ಯ­ರಾತ್ರಿಯೋ ಅಥವಾ ಮೂರನೆ ದಿನ ಬೆಳಗಿನ ಜಾವವೋ ಬಂದು ತಲುಪಬೇಕು. ಹೆಚ್ಚು ಕಡಿಮೆ ಎರಡು ದಿನದ ಮಟ್ಟಿಗೆ ಮಹಿಳೆಯರು ಮನೆ­ಯಿಂದ ದೂರವಿರ­ಬೇಕು. ಇಷ್ಟು ದೀರ್ಘ ಅವಧಿ­ಯಲ್ಲಿ ಮಲ–ಮೂತ್ರದ ಬಾಧೆ ತೀರಿಸಿಕೊಳ್ಳುವುದು ಹೇಗೆ? ಈ ಅವಧಿಯಲ್ಲಿ ಸ್ತ್ರೀಯರಿಗೆ ಮಾಸಿಕ ಸ್ರಾವ ಕಾಣಿಸಿ­ಕೊಂಡ­ರಂತೂ ನರಕವೇ ಸರಿ. ಕೆಲವೊ­ಮ್ಮೆ­ ನಾಲ್ಕು ಪುರು­ಷರ ನಡುವೆ ಒಬ್ಬಳೇ ಮಹಿಳೆಗೆ ನಿಯೋ­ಜಿ­ಸ­ಲಾಗಿರುತ್ತದೆ. ಅಪರಿಚಿತ ಪುರುಷರ ನಡುವೆ ಇದಂತೂ ಹೇಳಿಕೊಳ್ಳಲಾಗದ ಸಂಕಟ­ವಾಗು­ತ್ತದೆ.

ಸಾಧ್ಯವಾದಷ್ಟು ಈ ಕೆಲಸಗಳಿಗೆ ಪುರುಷರನ್ನು ನಿಯೋಜಿಸುವುದು ಒಳಿತು. ಯಾವ ಕೆಲಸವನ್ನಾದರೂ ಮಾಡು­­ವಲ್ಲಿ ಮಹಿಳೆ­ಯರು ಹಿಂದೆ ಸರಿ­ಯುತ್ತಿಲ್ಲ. ಆದರೆ ಪುರುಷರ ಹೆಗಲೆಣೆ­ಯಾಗಿ ದುಡಿಯುತ್ತಿರುವ ಮಹಿಳೆಯ­ರನ್ನು ಗೌರವದಿಂದ ನೋಡಬೇಕಾದ ಹೊಣೆ­ಗಾರಿಕೆ ಸಮಾಜ ಮತ್ತು ಸರ್ಕಾರಕ್ಕೆ ಇರಬೇ­ಡವೆ? ಚುನಾವಣಾ ಕೆಲಸ ಎಲ್ಲ ನೌಕರರ ಕರ್ತವ್ಯ ಎಂದಾದರೆ ಮೂಲಸೌಲಭ್ಯಗಳನ್ನು ಪಡೆ­ಯುವುದು ಹಕ್ಕಾಗಿದೆ ಎಂಬುದನ್ನು ಮರೆಯದಿರೋಣ.

ಇಷ್ಟಕ್ಕೂ ಕೇಂದ್ರ ಚುನಾವಣಾ ಆಯೋಗ, ಮೂಲ ಸೌಲಭ್ಯಗಳಿ­ಲ್ಲ­ದಿ­ದ್ದಲ್ಲಿ ಮಹಿಳೆ­ಯರನ್ನು ಚುನಾವಣಾ ಕೆಲಸಕ್ಕೆ ನಿಯೋಜಿಸ-­­ಬಾರದೆಂದು 1996ರಲ್ಲೇ ನಿರ್ದೇ­ಶನ ನೀಡಿದೆ. ಪ್ರತಿ ಚುನಾವಣೆ ಸಂದರ್ಭ­ಗಳಲ್ಲಿ ಮಹಿ­ಳೆ­ಯರು ಈ ಸೌಲಭ್ಯ­ಗಳನ್ನು ಕುರಿತು ಧ್ವನಿ ಎತ್ತಿ­ರು­ವರಾ­ದರೂ ಸರ್ಕಾರ ಕಿವಿಗೊಟ್ಟಿಲ್ಲ.

Share This
300x250 AD
300x250 AD
300x250 AD
Back to top