Slide
Slide
Slide
previous arrow
next arrow

ಮನೆ ಕಳ್ಳತನ: ಪ್ರಕರಣ ದಾಖಲು

300x250 AD

ಭಟ್ಕಳ :ತಾಲೂಕಿನ ಸೋಡಿಗದ್ದೆ ಕ್ರಾಸ್ ಸಮೀಪದ ಮನೆಯೊಂದಕ್ಕೆ ರವಿವಾರ ಮುಂಜಾನೆ ವೇಳೆ ನುಗ್ಗಿದ ಕಳ್ಳರು ಹಣ ಹಾಗೂ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ರವಿವಾರ ಬೆಳ್ಳಿಗ್ಗೆ 9.30ಕ್ಕೆ ಪ್ರಕರಣ ದಾಖಲಾಗಿದೆ.

ಕಳ್ಳತನವಾದ ಮನೆಯ ಮಾಲೀಕ ಮಂಜುನಾಥ ಬಡಿಯಪ್ಪ ನಾಯ್ಕ ಕಳೆದ 4 ವರ್ಷಗಳ ಹಿಂದೆ ಭಟ್ಕಳದ ಯಲ್ವಡಿ ಕವೂರಿನಲ್ಲಿ ಹೊಸದಾದ ಮನೆಯನ್ನು ಕಟ್ಟಿ ಅದರಲ್ಲಿ ವಾಸವಾಗಿದ್ದವರು. ಆದರೆ ಇವರು ವೃತ್ತಿಯ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದು ಮನೆಯನ್ನು ನೋಡಿಕೊಳ್ಳಲು
ಅದೆ ಗ್ರಾಮದ ರಮೇಶ ನಾಯ್ಕ ಅವರಿಗೆ ತಿಳಿಸಿದ್ದು ಅದರಂತೆ ರಮೇಶ ನಾಯ್ಕ ಮನೆಯನ್ನು ನೋಡಿಕೊಂಡಿದ್ದು ಶನಿವಾರ ರಾತ್ರಿ
ಮನೆಯ ಬಳಿ ಹೋಗಿ ಬಾಗಿಲನ್ನು ತೆಗೆದು ಮನೆಯ ಹೊರಗಿನ ಲೈಟನ್ನು ಹಾಕಿ ಮನೆಗೆ ಬೀಗ ಹಾಕಿ ಬಂದವರು ಪುನಃ ರಾತ್ರಿ 12.15 ಕ್ಕೆ ಮನೆಯ ಬಳಿ ಹೋಗಿ ವರಿಶೀಲಿಸಿ ಬಂದಿದ್ದರು.ನಂತರ ಬೆಳಿಗ್ಗೆ ಮನೆಯ ಲೈಟ್ ಬಂದ ಮಾಡಲು ಹೋಗಿ ನೋಡಿದಾಗ ಯಾರೋ ಕಳ್ಳರು ಸದರಿ ಮನೆಯ ಮುಂಬಾಗಿಲಿನ ಇಂಟರ್ ಲಾಕ್ ಮುರಿದು ಮನೆಯ ಒಳಗೆ ಹೋಗಿ ಮನೆಯ ಬೆಡ್ ರೂಮ್ ಕೋಣೆಯ ಕಪಾಟಿನಲ್ಲಿದ್ದ ಚಿನ್ನಾಭರಣ, ಬೆಳ್ಳಿ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ. ಬಳಿಕ ಕಳ್ಳತನವಾಗಿರುವ ಬಗ್ಗೆ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

300x250 AD

ಪರಿಶೀಲನೆಯಲ್ಲಿ 20 ಸಾವಿರ ಮೌಲ್ಯದ ಚಿನ್ನಾಭರಣ, 29 ಸಾವಿರ ಮೌಲ್ಯದ ಬೆಳ್ಳಿ ಹಾಗೂ 25 ಸಾವಿರ ನಗದು ಸೇರಿ ಒಟ್ಟು 74 ಸಾವಿರ ಮೌಲ್ಯದ ಸ್ವತ್ತನ್ನು ಕಳುವಾಗಿರುವ ಬಗ್ಗೆ ದೂರಿನಲ್ಲಿ ದಾಖಲಾಗಿದೆ. ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Share This
300x250 AD
300x250 AD
300x250 AD
Back to top