Slide
Slide
Slide
previous arrow
next arrow

ಬಕ್ಕಳ ಎಮ್.ಪಿ.ಸೊಸೈಟಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

300x250 AD

ಶಿರಸಿ :ತಾಲೂಕಿನ ವಿವಿಧೋದ್ದೇಶಗಳ ಸಹಕಾರಿ ಸಂಘ ಬಕ್ಕಳ ( ಎಮ್.ಪಿ.ಸೊಸೈಟಿ ) ಇದರ ಮುಂದಿನ ೫ ವರ್ಷದ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಜಿ.ಎನ್.ಹೆಗಡೆ ನಕ್ಷೆ ಹಾಗೂ ಉಪಾಧ್ಯಕ್ಷರಾಗಿ ಜಿ.ಆರ್.ಹೆಗಡೆ ಅಂಬಳಿಕೆ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಆವರಣದಲ್ಲಿ ಸೋಮವಾರ ನಡೆದ ನೂತನ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಷೇರುದಾರರು ಹೊಸ ಆಡಳಿತ ಮಂಡಳಿಗೆ ಮಣೆ ಹಾಕಿದ್ದರು. ಅದರಂತೆ ಕಳೆದ ಮೂರು ದಶಕಗಳ ಬಳಿಕ ಈಗ ಹೊಸ ಅಧ್ಯಕ್ಷರ ನೇಮಕಾತಿ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಜಿ.ಎನ್.ಹೆಗಡೆ, ಕಳೆದ ಕೆಲ ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಷೇರುದಾರರು ನಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಪಕ್ಷಾತೀತಾಗಿ ಎಲ್ಲರ ಸಹಕಾರ ಇದರಲ್ಲಿದೆ. ಮುಂದಿನ ದಿನದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಏಳ್ಗೆಗೆ ಎಲ್ಲರೂ ಶ್ರಮಿಸುತ್ತೇವೆ ಎಂದರು. ಇದಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದು ವಿನಂತಿಸಿದರು.‌

ಈ ವೇಳೆ ನಿರ್ದೇಶಕರಾದ ಗಿರೀಶ ಶಾಂತಾರಾಮ ಭಟ್ಟ ಬಕ್ಕಳ, ಪ್ರಕಾಶ ಹೆಗಡೆ ತೋಟದಮನೆ , ಮಹಾಬಲೇಶ್ವರ ಹೇಮು ಮರಾಟಿ, ಜಿ.ಎನ್.ಭಟ್ ಬೆಣ್ಣೆಗದ್ದೆ, ತಿಮ್ಮಪ್ಪ ನಾಯ್ಕ, ಫಣಿವೇಣಿ ಹೆಗಡೆ ಬಕ್ಕಳ , ಶೋಭಾ ಹೆಗಡೆ ಅಂಬಳಿಕೆ, ಮಾದೇವಿ ಚಲುವಾದಿ ಹಾಗೂ ವಿನಯ್ ಗೌಡರ್ ಮತ್ತು ಸಿಬ್ಬಂದಿಗಳು ಇದ್ದರು.

300x250 AD

ಬಕ್ಕಳ ಸಹಕಾರಿ ಸಂಘದ ವ್ಯಾಪ್ತಿಯ ಎಲ್ಲರ ಸಹಕಾರದಿಂದ, ಪಕ್ಷಾತೀತವಾಗಿ ಗೆಲುವು ಸಾಧಿಸಲಾಗಿದೆ. ಸಂಘದಲ್ಲಿ ಉತ್ತಮ, ವಿಶ್ವಾಸಾರ್ಹ ವ್ಯವಹಾರಕ್ಕೆ ಒತ್ತು ನೀಡಿ, ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. — ಜಿ.ಎನ್.ಹೆಗಡೆ ನಕ್ಷೆ, ನೂತನ ಅಧ್ಯಕ್ಷ

Share This
300x250 AD
300x250 AD
300x250 AD
Back to top