Slide
Slide
Slide
previous arrow
next arrow

ಚಂದನ ಪಿಯು ಕಾಲೇಜ್ ವಾರ್ಷಿಕೋತ್ಸವ ಯಶಸ್ವಿ

300x250 AD

ಶಿರಸಿ: ಇತ್ತೀಚೆಗೆ ಇಲ್ಲಿನ ಚಂದನ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ನಡೆಯಿತು. ಪ್ರಾಚಾರ್ಯರಾದ ಡಾ.ಆರ್‌.ಎಮ್‌.ಭಟ್‌ ಆಗಮಿಸಿದ ಎಲ್ಲ ಅತಿಥಿಗಳನ್ನು ಆಮಂತ್ರಿಸಿದರು.ಉದ್ಘಾಟಕರಾಗಿ ಸಿದ್ದಾಪುರದ ಶಿಕ್ಷಣ ಪ್ರಸಾರ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ ಆಗಮಿಸಿ, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಪ್ರಜ್ಞಾ ಜ್ಞಾನ ಸತ್ಯದ ಬಗ್ಗೆ ಒತ್ತಿ ಹೇಳಿದರು. ಸಂಸ್ಥೆಯನ್ನು ಇಷ್ಟು ಎತ್ತರಕ್ಕೆ ಕಟ್ಟಿಬೆಳೆಸಿದ್ದಕ್ಕಾಗಿ ಸಂಸ್ಥಾಪಕರು ಮತ್ತು ಕಾರ್ಯದರ್ಶಿಗಳಾದ ಎಲ್‌.ಎಮ್‌.ಹೆಗಡೆ ಹಾಗೂ ಅವರ ತಂಡವನ್ನು ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದನ ಪದವಿ ಪೂರ್ವಕಾಲೇಜಿನ ಅಧ್ಯಕ್ಷ ವಿ.ಜಿ.ಜೋಶಿ ಶಿರಸಿ ವಹಿಸಿದ್ದರು. ಎಲ್‌ ಎಮ್‌ ಹೆಗಡೆ ಸ್ವಾಗತ ಭಾಷಣ ಮಾಡಿದರು. ಅಥಿತಿಗಳಾಗಿ ಚಂದನ ಪಿಯು ಕಾಲೇಜಿನ ಸಿ.ಇ.ಓ ಸಿ.ಡಿ ನಾಯ್ಕ, ಸದಸ್ಯರಾದ ವಿನಯ ಜೋಶೀ, ಸೀತಾರಾಮ ಹೆಗಡೆ, ಕಿರಣ ಭಟ್‌, ಟ್ರಸ್ಟಿ ಸತೀಶ ಹೆಗಡೆ ಹಾಗೂ ಇತರ ಸದಸ್ಯರುಗಳು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ವಾರ್ಷಿಕ ವರದಿಯನ್ನು ಉಪನ್ಯಾಸಕಿ ಸ್ನೇಹಾ ಹೆಗಡೆ ವಾಚಿಸಿದರೆ, ಬಹುಮಾನ ವಿರಣೆಯನ್ನು ಉಪನ್ಯಾಸಕರಾದ ಡಾ. ವಿಜಯಲಕ್ಷ್ಮೀ ಹೆಗಡೆ ಹಾಗೂ ಗುರು ವಿಘ್ನೇಶ ಭಟ್‌ ನಡೆಸಿಕೊಟ್ಟರು. ಉಪನ್ಯಾಸಕಿಯಾದ ಶ್ರೀಮತಿ ತಬಸ್ಸುಮ್‌ ವಂದಿಸಿದರು, ಉಪನ್ಯಾಸಕರಾದ ಮಂಜುನಾಥ ಭಟ್‌ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top