Slide
Slide
Slide
previous arrow
next arrow

ಶ್ರೀರಾಮ ಮಂದಿರ ಲೋಕಾರ್ಪಣೆ: ಕೆ.ಸಿ.ವೃತ್ತ ಗಣೇಶ ಮಂಡಳದಿಂದ ದೀಪೋತ್ಸವ

300x250 AD

ದಾಂಡೇಲಿ : ಅಯೋಧ್ಯೆಯ ಶ್ರೀರಾಮ ಮಂದಿರದ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ನಗರದ ಪ್ರಮುಖ ಸಾರ್ವಜನಿಕ ಗಣೇಶ ಮಂಡಳವಾಗಿರುವ ಕೆ.ಸಿ.ವೃತ್ತ ಸಾರ್ವಜನಿಕ ಗಣೇಶ ಮಂಡಳದ ವತಿಯಿಂದ ಕೆ.ಸಿ.ವೃತ್ತದಲ್ಲಿ ಸೋಮವಾರ ಸಂಜೆ ಶ್ರೀರಾಮಚಂದ್ರ ದೇವರ ನಾಮಸ್ಮರಣೆಯೊಂದಿಗೆ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀರಾಮನಿಗೆ ಜಯಕಾರವನ್ನು ಹಾಕಲಾಯಿತು. ಇದೇ ಸಂದರ್ಭದಲ್ಲಿ ಸಿಹಿಯನ್ನು ಹಂಚಿ ಸಂಭ್ರಮಿಸಲಾಯಿತು.

ಪ್ರಭು ಶ್ರೀರಾಮಚಂದ್ರನ ಭವ್ಯವಾದ ಚಿತ್ರವನ್ನು ರಂಗೋಲಿಯ ಮೂಲಕ ಬಿಡಿಸಿದ ಕಲಾವಿದ ರೋಟರಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ರವಿ ಶಾನಭಾಗ್ ಅವರನ್ನು ಕೆ.ಸಿ ವೃತ್ತ ಗಣೇಶ ಮಂಡಳದ ಅಧ್ಯಕ್ಷರಾದ ಟಿ.ಆರ್.ಚಂದ್ರಶೇಖರ್ ಮತ್ತು ಪ್ರಧಾನ ಕಾರ್ಯದರ್ಶಿ ಎಸ್. ಸೋಮಕುಮಾರ್ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಗಣೇಶ ಮಂಡಳದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top