Slide
Slide
Slide
previous arrow
next arrow

ಹೆಗ್ಗಾರ-ಗುಳ್ಳಾಪುರ ಸೇತುವೆ ಸ್ಥಳಕ್ಕೆ ಅಧಿಕಾರಿಗಳ ಭೇಟಿ: ಮರು ನಿರ್ಮಾಣದ ಕನಸಿಗೆ ಸ್ಫೂರ್ತಿ

300x250 AD

ಅಂಕೋಲಾ: ಹೆಗ್ಗಾರ ಗುಳ್ಳಾಪುರ ಸೇತುವೆ ಪುನರ್ ನಿರ್ಮಾಣಕ್ಕೆ ಸ್ಫೂರ್ತಿ ದೊರೆತಂತಾಗಿದ್ದು, ಲೋಕೋಪಯೋಗಿ ಇಲಾಖೆ ಧಾರವಾಡದ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಅಭಿಯಂತರರು ಸಂಪೂರ್ಣ ಕೊಚ್ಚಿ ಹೋಗಿರುವ ಸೇತುವೆಯ ಸ್ಥಳ ಪರಿಶೀಲಿಸಿದರು.
ಗುಳ್ಳಾಪುರ ಹೆಗ್ಗಾರ ಸೇತುವೆ ಪುನರ್ ನಿರ್ಮಾಣ ಹಕ್ಕೊತ್ತಾಯ ಸಮಿತಿ ಹೆಗ್ಗಾರರವರು ಈ ಸೇತುವೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ರವರಿಗೆ ಮನವಿ ಅರ್ಪಿಸಿದ್ದರು. ಶಾಸಕ ಸೈಲ್ ವಿಶೇಷ ಕಾಳಜಿ ವಹಿಸಿ ಈ ಸೇತುವೆ ನಿರ್ಮಾಣ ಅಗತ್ಯವಾಗಿದ್ದು ಈ ಸೇತುವೆಯಿಂದ ಸಹಸ್ರಾರು ಕುಟುಂಬಗಳಿಗೆ ಸಹಾಯವಾಗುತ್ತದೆ ಎಂದು ಅಧಿಕಾರಿಗಳನ್ನು ಪರಿಶೀಲನೆಗೆ ಕಳುಹಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಹಿರಿ ಕಿರಿಯ ಅಧಿಕಾರಿಗಳು, ಸ್ಥಳೀಯರು ಹಾಗೂ ಸಮಿತಿಯ ಉಪಾಧ್ಯಕ್ಷ ಪಿ ವಿ ಕಲಗಾರೆ, ಕಾರ್ಯದರ್ಶಿ ಜಯಪ್ರಕಾಶ ಗಾಂವಕರ, ಜಿ.ಆರ್ ಭಟ್ ಸೇರಿದಂತೆ ಇತರರು ಸೇತುವೆ ಗೆ ಸಂಬಂಧಿಸಿದ ಮಾಹಿತಿ ಪೂರೈಸಿದರು.

300x250 AD

ನಮಗೆ ಈ ಸೇತುವೆ ಆದಷ್ಟು ಶೀಘ್ರವಾಗಿ ಆಗಬೇಕಿದೆ. ಸೇತುವೆ ಕುಸಿದ ಸ್ಥಳಕ್ಕೆ ರಾಜ್ಯ ನಾಯಕರು ಸೇರಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರಿಗೆ ಅತಿ ಅವಶ್ಯವಿರುವ ಸೇತುವೆ ಆದಷ್ಟು ಶೀಘ್ರವಾಗಿ ನಿರ್ಮಾಣವಾಗಲಿ ಎಂಬುದು ಗ್ರಾಮಸ್ಥರ ಆಶಯ.– ಜಿ.ಆರ್. ಭಟ್ ಗುಳ್ಳಾಪುರ

Share This
300x250 AD
300x250 AD
300x250 AD
Back to top