Slide
Slide
Slide
previous arrow
next arrow

ಅಂಬೋಳಿ ಗ್ರಾಮಕ್ಕಿಲ್ಲದ ವಿದ್ಯುತ್ ಪೂರೈಕೆ: ಗ್ರಾಮಸ್ಥರಿಂದ ಪ್ರತಿಭಟನೆಯ ಎಚ್ಚರಿಕೆ

300x250 AD

ಜೊಯಿಡಾ: ತಾಲೂಕಿನ‌ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಬೋಳಿ ಗ್ರಾಮದ 6 ಮಜರೆಗಳಿಗೆ ವಿದ್ಯುತ್ ಪೂರೈಸಲು ಹೆಸ್ಕಾಂ ಇಲಾಖೆ ವಿಫಲವಾಗಿದ್ದು, ಒಂದು ವಾರದೊಳಗೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳದೇ ಇದ್ದರೆ ತಹಶೀಲ್ದಾರ್ ಕಾರ್ಯಾಲಯದ ಮುಂಬಾಗದಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಅಂಬೋಳಿ ಗ್ರಾಮಸ್ಥರು ಜೋಯಿಡಾ ತಹಶೀಲ್ದಾರ್ ಮಂಜುನಾಥ್ ಮುನ್ನೋಳ್ಳಿಯವರಿಗೆ ಗುರುವಾರ ಲಿಖಿತ ಮನವಿ ನೀಡಿ ಆಗ್ರಹಿಸಿದ್ದಾರೆ.

ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ ಅಂಬೋಳಿ ಗ್ರಾಮದ ಮಜರೆಗಳಾದ ಕಾಮರೆ, ಬಿಕಂಡಿ, ಚಾಂದೇಗಾಳಿ, ಫೊಂಡೆಗಾಳಿ, ಭೋಗಾಳಿ ಮತ್ತು ಕುಂಬಾರಮಾತಿ ಮಜರೆಗಳಲ್ಲಿ 20 ಕ್ಕೂ ಹೆಚ್ಚು ಕುಟುಂಬಗಳು ಅನಾದಿಕಾಲದಿಂದಲೂ ವಾಸವಾಗಿದ್ದು, ದೇಶ ಸ್ವಾತಂತ್ರ್ಯವಾಗಿ 7 ದಶಕ ಕಳೆದರೂ ಇಲ್ಲಿಯ ಮನೆಗಳ ಕತ್ತಲೆಯನ್ನು ಹೋಗಲಾಡಿಸುವ ಕೆಲಸವಾಗಿಲ್ಲ. ಇಲ್ಲಿರುವ ಹರಿಜನ‌ ಕುಟುಂಬವು ವಿದ್ಯುತ್ ಬೆಳಕಿನ‌ ಭಾಗ್ಯದಿಂದ ವಂಚಿತವಾಗಿದೆ. ಈ ಗ್ರಾಮಗಳಿಗೆ 2017 ರಲ್ಲಿ ವಿದ್ಯುತ್ ಮಂಜೂರಿ ಆದಾಗ ಗ್ರಾಮ ಪಂಚಾಯತ್ ಉಳವಿ ಮುಖಾಂತರ ರೇಶನ್ ಕಾರ್ಡ್, ಆಧಾರ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಲಾಗಿದೆ. ಬೆಳಕು ಯೋಜನೆ ನಮ್ಮ ಪಾಲಿಗೆ ಕತ್ತಲೆಯ ಯೋಜನೆಯಾಗಿದೆ. ಶಾಲಾ ವಿದ್ಯಾರ್ಥಿಗಳು, ರೈತರು ತುಂಬಾ ತೊಂದರೆ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಒಂದು ವಾರದೊಳಗೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳದೇ ಇದ್ದರೆ ತಹಶೀಲ್ದಾರ್ ಕಾರ್ಯಾಲಯದ ಮುಂಭಾಗದಲ್ಲಿ ನಿರಂತರ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಿದ್ದಾರೆ.

300x250 AD

ಮನವಿ ‌ನೀಡುವ ಸಂದರ್ಭದಲ್ಲಿ ಪ್ರಮುಖರಾದ ಪ್ರೇಮಾನಂದ ವೆಳಿಪ, ಸಂದೇಶ ಮಿರಾಶಿ, ಲಕ್ಷ್ಮಣ ಮಿರಾಶಿ, ಗ್ರಾ.ಪಂ ಸದಸ್ಯರಾದ ವಿಷ್ಣು ಭಿರಂಗತ್, ಸೈನಿಕರ ಸಂಘದ ತಾಲೂಕು ಅಧ್ಯಕ್ಷರಾದ ಸಂತೋಷ ಸಾವಂತ್ ,ಲಕ್ಷ್ಮಣ ಹನ್ನೋಲಕರ, ಸಂದೀಪ್ ಮಿರಾಶಿ, ಕೃಷ್ಣ ಮಿರಾಶಿ, ಕೃಷ್ಣ ಹರಿಜನ, ಗೋಪಾಲ ಬಿರಂಗತ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top