Slide
Slide
Slide
previous arrow
next arrow

ಸ್ವರ್ಣವಲ್ಲೀ ಶ್ರೀಗಳ ಉತ್ತರಾಧಿಕಾರಿ ಶಿಷ್ಯರಾಗಿ ವಿ. ನಾಗರಾಜ ಭಟ್ಟರ ಆಯ್ಕೆ:ಫೆ.22ಕ್ಕೆ ಶಿಷ್ಯಸ್ವೀಕಾರ ಕಾರ್ಯಕ್ರಮ

300x250 AD

ಶಿರಸಿ: ತಾಲೂಕಿನ ಸ್ವರ್ಣವಲ್ಲೀ ಶ್ರೀಮಠದ ಪೀಠಾಧೀಶರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಅಪೇಕ್ಷೆ, ಅದೇಶ ಮತ್ತು ಜ್ಯೋತಿಷಿಗಳ ಸಲಹೆಗೆ ಮೇರೆಗೆ ಯಲ್ಲಾಪುರ ತಾಲೂಕಿನ ಈರಾಪುರದ ವಿ. ನಾಗರಾಜ ಭಟ್ಟ ಇವರನ್ನು ಪರಮಪೂಜ್ಯ ಶ್ರೀಗಳವರ ಶಿಷ್ಯರನ್ನಾಗಿ ಸ್ವೀಕರಿಸಲು ಡಿ.25 ರಂದು ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಶ್ರೀಗಳ ಶಿಷ್ಯ ಸ್ವೀಕಾರದ (ಸನ್ಯಾಸಾಶ್ರಮದ) ಕಾರ್ಯಕ್ರಮ ಮಾಘ ಶುದ್ಧ ತ್ರಯೋದಶಿ,ಫೆ.22, 2024 ಗುರುವಾರದಂದು ನಡೆಯಲಿದ್ದು, ಸಮಗ್ರ ಕಾರ್ಯಕ್ರಮದ ಮಾಹಿತಿಯನ್ನು ನಿರ್ಣಯದ ನಂತರ ತಿಳಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top