Slide
Slide
Slide
previous arrow
next arrow

ಒಂಟಿ ವೃದ್ಧೆಯ ಕೊಲೆಗೆ ಸಂಚು: ದರೋಡೆಗೆ ಯತ್ನ

300x250 AD

ಭಟ್ಕಳ: ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಟಾರ್ಗೆಟ್ ಮಾಡಿದ ಕಳ್ಳನೊರ್ವ ವೃದ್ಧೆಯನ್ನು ಸಾಯಿಸಿ ದರೋಡೆ ಮಾಡಲು ಯತ್ನಿಸಿದ್ದು ಅದೃಷ್ಟವಶಾತ್ ವೃದ್ಧೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಂಡಳ್ಳಿ ಜೋಗಿಮನೆ ಸಮೀಪ ನಡೆದಿದೆ.

ಮನೆಯಲ್ಲಿದ್ದ ಒಂಟಿ ವೃದ್ಧೆಯನ್ನು ಶೋಭಾ ಎಂ. ದಿಕ್ಷಿತ್ (71) ತಿಳಿದು ಬಂದಿದೆ. ಈಕೆಗೆ ಓರ್ವ ಪುತ್ರನಿದ್ದು ಆತ ಉದ್ಯೋಗದ ನಿಮಿತ್ತ ಉಡುಪಿಯಲ್ಲಿ ವಾಸವಾಗಿದ್ದು. ಸಧ್ಯ ಮನೆಯಲ್ಲಿ ವೃದ್ಧೆ ಓರ್ವಳೇ ವಾಸವಾಗಿದ್ದಳು. ಇದನ್ನು ಗಮನಿಸಿ ಕಳ್ಳನೊರ್ವ ಈಕೆಯನ್ನು ಕೊಲೆ ಮಾಡುವ ಉದ್ದೇಶದಿಂದ ಮನೆಯ ಮೇಲಿನ ಬಾಲ್ಕನಿಯಿಂದ ಬಾಗಿಲಿನ ಕೀಲಿ ತೆಗೆದು ಮನೆಯ ಒಳಗೆ ಇಳಿದು ಬಂದ ಕಳ್ಳ ಮನೆಯ ಹಾಲಿನಲ್ಲಿ ಟಿ.ವಿ ನೋಡುತ್ತಾ ಕುಳಿತುಕೊಂಡಿದ್ದ ವೃದ್ಧೆ ಕುತ್ತಿಗೆಗೆ ಬಟ್ಟೆಯಿಂದ ಸುತ್ತಿ ಎಳೆದು ಹಿಡಿದು ಕೊಲೆ ಮಾಡಲು ಯತ್ನಿಸಿದ ವೇಳೆ ವೃದ್ಧೆ ಕೂಗಾಡಿದ್ದಾಳೆ. ನಂತರ ಗಾಬರಿಯಾದ ಕಳ್ಳ ಹಾಗೆಯೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯಲ್ಲಿ ವೃದ್ಧೆಯ
ಮೂಗಿನ ಭಾಗದಲ್ಲಿ ಚಿಕ್ಕ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ 15 ದಿನದ ಹಿಂದಷ್ಟೇ ಇವರ ಮನೆಯಲ್ಲಿ ಎರಡು ಚಿನ್ನದ ಓಲೆ, ಒಂದು ಚೈನ್ ,ಒಂದು ಉಂಗುರ ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

300x250 AD

ಈ ಕುರಿತು ವೃದ್ಧೆಯ ಪುತ್ರ ಹರೀಶ ದೀಕ್ಷಿತ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ತನಿಖಾಧಿಕಾರಿ ಸಿ.ಪಿ.ಐ ಚಂದನ ಗೋಪಾಲ ತನಿಖೆ ಕೈಗೊಂಡಿದ್ದಾರೆ.

Share This
300x250 AD
300x250 AD
300x250 AD
Back to top