Slide
Slide
Slide
previous arrow
next arrow

ಕನ್ನಡ ಕಾರ್ತಿಕ 2023: ನ.23ಕ್ಕೆ ಉಪನ್ಯಾಸ

300x250 AD

ಯಲ್ಲಾಪುರ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಯಲ್ಲಾಪುರ ಘಟಕದ ಆಶ್ರಯದಲ್ಲಿ ಕನ್ನಡ ಕಾರ್ತಿಕ 2023 ಅನುದಿನ ಅನುದಿನ ಅನುಸ್ಪಂದನ ಅಂಗವಾಗಿ ನ.23 ಗುರುವಾರ ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಬಿಸಗೋಡ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿದೆ.

ಆನಗೋಡ ಗ್ರಾ ಪಂ ಅಧ್ಯಕ್ಷೆ ಮೀನಾಕ್ಷಿ ಭಟ್ಟ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಸಾಪ ತಾಲೂಕಾ ಅಧ್ಯಕ್ಷ
ವಿದ್ವಾನ್ ಸುಬ್ರಹ್ಮಣ್ಯ ಭಟ್ ವಹಿಸಲಿದ್ದಾರೆ.ಆಧುನಿಕ ಕನ್ನಡ ಸಾಹಿತ್ಯ ಕುರಿತಾಗಿ ವಿಶ್ವದರ್ಶನ ಕಾಲೇಜಿನ ಪ್ರಾಂಶುಪಾಲ ಡಾ ದತ್ತಾತ್ರೇಯ ಗಾಂವ್ಕಾರ ಉಪನ್ಯಾಸ ನೀಡಲಿದ್ದಾರೆ. ಬಿಇಒ ಎನ್ ಆರ್ ಹೆಗಡೆ,ಎಸ್ ಡಿ ಎಂಸಿ ಅಧ್ಯಕ್ಷ ಗಣಪತಿ ಭಟ್, ಮುಖ್ಯಾಧ್ಯಾಪಕ ಎಂ ಆರ್ ನಾಯಕ, ಪ್ರಮುಖರಾದ ದತ್ತಾತ್ರೇಯ ಭಟ್,ಶ್ರೀಧರ ಹೆಗಡೆ,ಸಂಜೀವಕುಮಾರ ಹೊಸ್ಕೇರಿ, ಗಣಪತಿ ಭಟ್,ಶಾಲಿನಿ ನಾಯ್ಕ,ಡಿ ಎನ್ ಗಾಂವ್ಕಾರ ಭಾಗವಹಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top