Slide
Slide
Slide
previous arrow
next arrow

ನ.20ಕ್ಕೆ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಸಂಕಲನ ಬಿಡುಗಡೆ

300x250 AD

ಅಂಕೋಲಾ: ಇಲ್ಲಿನ ಪಿ.ಎಂ.ಸಂಯುಕ್ತ ಪ.ಪೂ ಕಾಲೇಜು ಮತ್ತು ಡಾ.ದಿನಕರ ದೇಸಾಯ ಸ್ಮಾರಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕವಿ ಫಾಲ್ಗುಣ ಗೌಡರ ‘ಬಿಂಜೆಮುಳ್ಳು’ ಕವನ ಸಂಕಲನ ಬಿಡುಗಡೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನ.20ರ ಬೆಳಿಗ್ಗೆ 10.30 ಗಂಟೆಗೆ ಪಿ.ಎಂ.ಸಂಯುಕ್ತ ಪ.ಪೂ ಕಾಲೇಜಿನಲ್ಲಿ ನಡೆಯಲಿದೆ.

ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿಯವರು ಕೃತಿ ಬಿಡುಗಡೆ ಮಾಡಲಿದ್ದಾರೆ.ಮುಖ್ಯ ಅತಿಥಿಯಾಗಿ ವಿಶ್ರಾಂತ ಪ್ರಾಚಾರ್ಯ ಡಾ.ಶಿವಾನಂದ ನಾಯಕ ಆಗಮಿಸಲಿದ್ದಾರೆ. ಕವಿಗಳಾದ ಡಾ.ಸಿದ್ಧಲಿಂಗ ಸ್ವಾಮಿ ವಸ್ತೃದ್ ಮತ್ತು ಹೊನ್ನಾವರದ ನಾಗರಾಜ್ ಹೆಗಡೆ ಅಪಗಾಲ್ ಪುಸ್ತಕದ ಕುರಿತು ಮಾತನಾಡಲಿದ್ದಾರೆ.ದಿನಕರ ಪ್ರತಿಷ್ಠಾನದ ಮೋಹನ್ ಹಬ್ಬು ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಕವಿ ಫಾಲ್ಗುಣ ಗೌಡ ಉಪಸ್ಥಿತರಿರುವರು ಎಂದು ದಿನಕರ ದೇಸಾಯಿ ಪ್ರತಿಷ್ಠಾನದ ಅಧ್ಯಕ್ಷ ಮೋಹನ್ ಹಬ್ಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top