Slide
Slide
Slide
previous arrow
next arrow

ಪಾನಮತ್ತ ಯುವಕನಿಂದ ಭಿಕ್ಷುಕನ ಮೇಲೆ ಹಲ್ಲೆ

300x250 AD

ಕುಮಟಾ: ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಪಾನಮತ್ತನಾದ ಯುವಕನೋರ್ವ ಭಿಕ್ಷುಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಯುವಕನೋರ್ವ ಕಂಠಪೂರ್ತಿ ಕುಡಿದು ಮತ್ತಿನಲ್ಲಿದ್ದ ಸಂದರ್ಭದಲ್ಲಿ ಬಸ್ ನಿಲ್ದಾಣದ ಕ್ಯಾಂಟಿನ್ ಹೊರಭಾಗದಲ್ಲಿ ಮಲಗಿದ್ದ ಹಾನಗಲ್ ಮೂಲದ ಬಿಕ್ಷುಕನ ಮೇಲೆ ಸ್ಟೀಲ್ ರೋಡ್‌ನಿಂದ ಹಲ್ಲೆ ಮಾಡಿದ್ದಾನೆ.

300x250 AD

ಇದರಿಂದ ಗಂಭೀರ ಗಾಯಗೊಂಡ ಭಿಕ್ಷುಕ ಕಿರುಚಿಕೊಂಡಾಗ ಬಸ್ ನಿಲ್ದಾಣದಲ್ಲಿದ್ದ ಜನರು ಭಿಕ್ಷುಕನ ನೆರವಿಗೆ ಧಾವಿಸಿ, ಗಾಯಗೊಂಡ ಆತನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ, ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ಹಲ್ಲೆ ಗೈದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top