Slide
Slide
Slide
previous arrow
next arrow

ಗೋವಾಕ್ಕೆ ಕೆಲಸಕ್ಕೆಂದು ತೆರಳಿದ್ದ ಯುವಕ ನಾಪತ್ತೆ

300x250 AD

ದಾಂಡೇಲಿ: ರಜೆಯಲ್ಲಿ ಮನೆಗೆ ಬಂದಿದ್ದ ಯುವಕನೋರ್ವನು ಮರಳಿ ಗೋವಾಕ್ಕೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಹೋದವನು ನಾಪತ್ತೆಯಾಗಿರುವ ಘಟನೆ ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದ ಗಾಂವಠಾಣದಲ್ಲಿ ನಡೆದಿದೆ.

ನವಗ್ರಾಮ ಗಾಂವಠಾಣ ನಿವಾಸಿ 26 ವರ್ಷ ವಯಸ್ಸಿನ ಆಕಾಶ್ ನಾಯ್ಕ ಎಂಬಾತನೇ ನಾಪತ್ತೆಯಾದ ಯುವಕನಾಗಿದ್ದಾನೆ. ಈತ ಗೋವಾದಲ್ಲಿ ಸ್ವಿಂಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು. ಈತ ಸೆಪ್ಟೆಂಬರ್ 13ರಂದು ಗೋವಾದಿಂದ ನವಗ್ರಾಮದಲ್ಲಿರುವ ತನ್ನ ಮನೆಗೆ ಬಂದು ಉಳಿದು ಮರುದಿನ ಬೆಳಿಗ್ಗೆ ಮರಳಿ ಗೋವಾಕ್ಕೆ ಹೋಗಿದ್ದನು. ಗೋವಾಕ್ಕೆ ಹೋದ ನಂತರ ಆತನು ಮನೆಯವರಿಗೆ ಮೊಬೈಲ್ ಸಂಪರ್ಕ ಮಾಡಿರಲಿಲ್ಲ. ಕಾರಣ ಆತನ ಮೊಬೈಲ್ ಕಳ್ಳತನವಾಗಿರುತ್ತದೆ ಎಂದು ಹೇಳಿದ್ದನು.

300x250 AD

ಮಗ ಮರಳಿ ಮನೆಗೆ ಬರದೇ ಇರುವುದರಿಂದ ಹಾಗೂ ಸಂಪರ್ಕಕ್ಕೆ ಸಿಗದೇ ಇರುವ ಹಿನ್ನೆಲೆಯಲ್ಲಿ ಆತನ ತಂದೆ ಚಂದ್ರಕಾಂತ ನಾಯಕ ಅವರು ಗೋವಾಕ್ಕೆ ತೆರಳಿ ಅವರ ಸಂಬಂಧಿಕರ ಮನೆಗೆ ಹೋಗಿ ವಿಚಾರಿಸಿದ್ದಾರೆ. ಕೆಲಸ ಮಾಡುವ ಸ್ಥಳದಲ್ಲಿಯೂ ವಿಚಾರಿಸಿದ್ದಾರೆ. ಅಲ್ಲಿ ಎಲ್ಲಿಯೂ ಕೂಡ ಆಕಾಶ್ ಚಂದ್ರಕಾಂತ ನಾಯ್ಕ ಇರುವುದಿಲ್ಲ. ಸಾಧ್ಯವಾದಷ್ಟು ಹುಡುಕುವ ಪ್ರಯತ್ನವನ್ನು ಮಾಡಿ ಕೊನೆಯಲ್ಲಿ ಮಗನನ್ನು ಪತ್ತೆ ಮಾಡಿಕೊಡುವಂತೆ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share This
300x250 AD
300x250 AD
300x250 AD
Back to top