Slide
Slide
Slide
previous arrow
next arrow

ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಇದ್ದಲ್ಲಿ ನೀಡಲು ಸೂಚನೆ

300x250 AD

ಕಾರವಾರ: ಕುಮಟಾ ತಾಲೂಕಿನ ಗೋಕರ್ಣ ಬಂಗ್ಲೇಗುಡ್ಡ ನಿವಾಸಿ ಸೂರಜ ನಾಯ್ಕ (22) ಎಂಬುವವರು ಸೆ.13ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಂಗ್ಲೆಗುಡ್ಡ ಗ್ರಾಮದಿಂದ ಎಲ್ಲಿಗೋ ಹೋದವನು ಮರಳಿ ಮನೆಗೂ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ.

ಸೂರಜ ನಾಯ್ಕ ತಾಯಿ ಮೋಹಿನಿ ನಾಯ್ಕ ಇವರು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಈ ವರೆಗೆ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವುದಿಲ್ಲ. ಕಾಣೆಯಾದ ಸೂರಜ ಗಣಪತಿ ನಾಯ್ಕ ಈತನ ಚಹರೆ ವಿವರ ದುಂಡನೆಯ ಮುಖ, ಬಲ ಕಣ್ಣಿನ ಕೆಳಗಡೆ ಹಳೆ ಗಾಯದ ಕಲೆ ಇರುತ್ತೆ, ಕನ್ನಡ ಭಾಷೆ ಮಾತನಾಡುತ್ತಾನೆ. ಮಣ್ಣಿನ ಬಣ್ಣದ ಟೀಶರ್ಟ್, ನೀಲಿ ಚಡ್ಡಿ ಧರಿಸಿರುತ್ತಾನೆ. ಈತನ ಬಗ್ಗೆ ಸಾರ್ವಜನಿಕರಿಗೆ ಯಾರಿಗಾದರೂ ಇವರ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಗೆ ತಿಳಿಸಿ ಎಂದು ಗೋಕರ್ಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top