Slide
Slide
Slide
previous arrow
next arrow

ಅ.2ರಿಂದ ಕುಮಟಾದಲ್ಲಿ ‘ಖಾದಿ ಮೇಳ’

300x250 AD

ಕುಮಟಾ: ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಅ.2ರಿಂದ 5ರವರೆಗೆ ಕುಮಟಾ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ವತಿಯಿಂದ `ಖಾದಿ ಮೇಳ’ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಮಂಡಲಾಧ್ಯಕ್ಷ ಹೇಮಂತಕುಮಾರ್ ಗಾಂವಕರ್ ತಿಳಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ವಿವಿಧ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಅ.2ರ ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಖಾದಿ ಮೇಳ ಆಯೋಜಿಸಲಾಗಿದೆ. ಖಾದಿ ಮೇಳದಲ್ಲಿ ಖಾದಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಪ್ರತಿ ವರ್ಷದಂತೆ ಈ ವರ್ಷವೂ ಕುಮಟಾ ಬಿಜೆಪಿ ಕಚೇರಿಯ ಆವರಣದಲ್ಲಿ ಅ.2ರಿಂದ 5ರವರೆಗೆ ಖಾದಿ ಮೇಳ ಬಹಳ ಯಶಸ್ವಿಯಾಗಿ ನಡೆಯಲಿದೆ. ಅ.2 ರಂದು ಖಾದಿ ಮೇಳದ ಉದ್ಘಾಟನೆ ನಡೆಯಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದಾಗಿದೆ. ಅ.5ರ ನಂತರ `ನನ್ನ ಮಣ್ಣು ನನ್ನ ದೇಶ’ ಇದರ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು, ಪಕ್ಷದ ಪ್ರತಿಯೊಬ್ಬರೂ ಸಹ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.

300x250 AD

ಸುದ್ದಿಗೋಷ್ಠಿಯಲ್ಲಿ ಶಾಸಕ ದಿನಕರ ಶೆಟ್ಟಿ, ಬಿಜೆಪಿ ಪ್ರಮುಖರಾದ ಎಂ.ಜಿ.ಭಟ್ಟ, ಡಾ.ಜಿ.ಜಿ.ಹೆಗಡೆ, ಜಿ.ಆಯ್.ಹೆಗಡೆ, ಕುಮಾರ್ ಮಾರ್ಕಾಂಡೆ, ಗಜಾನನ ಗುನಗಾ, ವಿನಾಯಕ ನಾಯ್ಕ, ಕುಮಾರ ಭಟ್ಟ, ಮಧುಸೂದನ ಹೆಗಡೆ, ಮೋಹಿನಿ ಗೌಡ, ಮಾದೇವಿ ಮುಕ್ರಿ ಸೇರಿದಂತೆ ವಿವಿಧ ಗ್ರಾ.ಪಂ ಅಧ್ಯಕ್ಷರು, ಪಕ್ಷದ ಅನೇಕರು ಹಾಜರಿದ್ದರು.

Share This
300x250 AD
300x250 AD
300x250 AD
Back to top