Slide
Slide
Slide
previous arrow
next arrow

ರಾಜ್ಯ ಕಿರಿಯರ ಕ್ರೀಡಾಕೂಟ: ಚಿನ್ನ,ಬೆಳ್ಳಿ ಪದಕ ಪಡೆದ ರಕ್ಷಿತ್ ರವೀಂದ್ರ

300x250 AD

ಶಿರಸಿ: ಕರ್ನಾಟಕ ರಾಜ್ಯ ಅಥ್ಲೇಟಿಕ್ ಸಂಸ್ಥೆ ಆಯೋಜಿಸಿದ, ರಾಜ್ಯ ಕಿರಿಯರ 20 ವರ್ಷ ವಿಭಾಗದ ಅಥ್ಲೇಟಿಕ್ ಕ್ರೀಡಾಕೂಟದಲ್ಲಿ, ರಕ್ಷಿತ್ ರವೀಂದ್ರ 400ಮೀ ಹರ್ಡಲ್ಸನಲ್ಲಿ (54.19ಸೆ.) ಪ್ರಥಮ ಸ್ಥಾನದೊಂದಿಗೆ ಚಿನ್ನ ಹಾಗೂ 400 ಮೀ (59.5 ಸೆ.) ಓಟದಲ್ಲಿ ದ್ವೀತಿಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದುಕೊಂಡಿರುತ್ತಾನೆ.

 ಮಂಗಳೂರಿನ ಮಂಗಲ ಕ್ರೀಡಾಂಗಣದಲ್ಲಿ ಜರುಗಿದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಈ ಸಾಧನೆ ಮಾಡಿ, ನವೇಂಬರ್ 3 ನೇ ವಾರ ಚೆನ್ನೈನಲ್ಲಿ ಜರಗುವ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕದಿಂದ ಪ್ರತಿನಿಧಿಸಲು ರಕ್ಷಿತ್ ಆಯ್ಕೆಯಾಗಿಗಿದ್ದಾನೆ.

300x250 AD

ಮೂಲತಃ ಶಿರಸಿಯವನಾದ ರಕ್ಷಿತ್ ರವೀಂದ್ರ ಪ್ರಸಕ್ತ, ಕೇಂದ್ರ ಸರಕಾರದ ಕ್ರೀಡಾ ಪ್ರಾಧಿಕಾರ ಬೆಂಗಳೂರು ಸಂಸ್ಥೆಯಲ್ಲಿ ಒಲಂಪಿಯನ್ ಅಶ್ವಿನಿ ಅಕ್ಕುಂಜಿ ಅವರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾನೆ.

Share This
300x250 AD
300x250 AD
300x250 AD
Back to top