Slide
Slide
Slide
previous arrow
next arrow

ಧಾರ್ಮಿಕತೆಯ ಜೊತೆಗೆ ಸಾಂಸ್ಕೃತಿಕವಿದ್ದರೆ ಮನಃತೃಪ್ತಿ: ಅನಂತ ಗೊಂಟನಾಳ

300x250 AD

ಸಿದ್ದಾಪುರ: ಮಾನಸಿಕ ವಿಪ್ಲವಗಳನ್ನು ಕಡಿಮೆ ಮಾಡಕೊಳ್ಳುವುದಕ್ಕೆ ಪೂಜೆ-ಪುನಸ್ಕಾರ ಸತ್ಕಥಾ ಕಾಲಕ್ಷೇಪ, ಸತ್ಸಂಗ ಹಾಗೂ ಯಕ್ಷಗಾನ ತಾಳಮದ್ದಳೆ ಮುಂತಾದವು ಸಹಕಾರಿಯಾಗುತ್ತವೆ. ಮನೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಜೊತೆಗೇ ಸಾಂಸ್ಕೃತಿಕ ಚಟುವಟಿಕೆಗಳೂ ನಡೆದರೆ ಕೈಗೊಂಡ ಕಾರ್ಯಗಳು ಪೂರಕವಾಗಿ ನಡೆಯುತ್ತವೆ ಎಂದು ಅನಂತ ಹೆಗಡೆ ಗೊಂಟನಾಳ ಹೇಳಿದರು.    

ಗೊಂಟನಳದ ವೆಂಕಟರಮಣ ಹೆಗಡೆಯವರು ತಮ್ಮ ಮನೆಯಲ್ಲಿ ನಲವತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಅನಂತ ಚತುರ್ದಶಿ ವ್ರತದ ಉದ್ಯಾಪನೆಯ ನಿಮಿತ್ತವಾಗಿ ನಡೆದ ತಾಳಮದ್ದಳೆ ವೇದಿಕೆಯಲ್ಲಿ ಮಾತನಾಡುತ್ತ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ತಾಲೂಕಿನ ಕಲಾಭಾಸ್ಕರ (ರಿ) ಇಟಗಿಯವರು ಸಂಯೋಜನೆಯಲ್ಲಿ ಕವಿ ಮಾಲೆಕೊಡಲು ಶಂಭು ಗಣಪತಿ ಭಟ್ಟ ವಿರಚಿತ ಚಂದ್ರಹಾಸ ಚರಿತ್ರೆ ಎಂಬ ಯಕ್ಷಗಾನ ತಾಳಮದ್ದಳೆಯು ಭಕ್ತಿ-ಭಾವ ಪುರಸ್ಸರವಾಗಿ ಪ್ರದರ್ಶನವು ಸಾಂಗವಾಗಿ ನೆರವೇರಿತು. ಗಣಪತಿ ಹೆಗಡೆ ಮುರೂರು ಹಾಗೂ ಶಶಿಕಲಾ ಹೆಗಡೆ ದ್ಯಾವಣಗದ್ದೆ ಭಾಗವತರಾಗಿ ಸುಶ್ರಾವ್ಯ ಹಾಡುಗಾರಿಕೆಯ ಮೂಲಕ ಪ್ರದರ್ಶನದ ಯಶಸ್ಸಿಗೆ ಮೂಲಕಾರಣರಾದರು. ಶರತ್ ಜಾನಕೈ ಮದ್ದಳೆಯಲ್ಲಿಯೂ, ರಘುಪತಿ ಹೂಡೆಹದ್ದ ಚಂಡೆ ವಾದನಗಳಲ್ಲಿ ಸಹಕರಿಸಿದರು.

300x250 AD

ಬೆಂಕ್ಟಳ್ಳಿ ಅರುಣಕುಮಾರ ಬಿ.ಟಿ. ಸಾಗರ ಇವರ ದುಷ್ಟಬುದ್ದಿ ಪಾತ್ರವು ಸೊಗಸಾಗಿ ನಿರೂಪಿತವಾಯಿತು. ರವಿಶಂಕರ ಸಾಗರ ಇವರ ಮದನನ ಪಾತ್ರವು ಸ್ವಾರಸ್ಯಕರವಾಗಿ ಮೂಡಿಬಂತು. ವಿಷಯೆಯಾಗಿ ಇಟಗಿ ಮಹಾಬಲೇಶ್ವರ ಭಟ್ಟ ಕಾಣಿಸಿಕೊಂಡರು. ಕವಲಕೊಪ್ಪ ವಿನಾಯಕ ಹೆಗಡೆ ಚಂದ್ರಹಾಸನನ್ನು ಕಟ್ಟಿಕೊಟ್ಟರು. ಕಟುಕರ ಪಾತ್ರದಲ್ಲಿ ನಾರಾಯಣ ಹೆಗಡೆ ಕಾನಜಡ್ಡಿ, ಕುಳಿಂದನಾಗಿ ಮಂಜುನಾಥ ಭಟ್ಟ ಕಲ್ಮನೆ, ಕಪ್ಪದೂತ ಮತ್ತು ಬ್ರಾಹ್ಮಣರಾಗಿ ಮುರೂರು ನಾಗೇಂದ್ರ ಹಾಸ್ಯದ ಹೊನಲನ್ನೇ ಹರಿಸಿದರು.

ಪ್ರಸನ್ನ ಹೊಸಗದ್ದೆ ಹಾಗೂ ಇತರರು ಉಳಿದ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿದರು. ಇಂತಹ ಕಲಾಪ್ರದರ್ಶನಗಳಿಂದಲೇ ವ್ರತಗಳು ಸತ್ಫಲವನ್ನು ಕೊಡುತ್ತವೆ ಎನ್ನುವ ಅಭಿಪ್ರಾಯವು ಸಾರ್ವತ್ರಿಕವಾಗಿ ವ್ಯಕ್ತವಾಯಿತು.

Share This
300x250 AD
300x250 AD
300x250 AD
Back to top