Slide
Slide
Slide
previous arrow
next arrow

ಬೆಳೆಸಿರಿ ರೈತ ಉತ್ಪಾದಕ ಕಂಪನಿಯ 3ನೇ ವರ್ಷದ ಸರ್ವ ಸಾಧಾರಣ ಸಭೆ

300x250 AD

ಶಿರಸಿ: ಬೆಳೆಸಿರಿ ರೈತ ಉತ್ಪಾದಕ ಕಂಪನಿಯ 3 ನೇ ವರ್ಷದ ಸರ್ವ ಸಾಧಾರಣ ಸಭೆಯು ತಾಲೂಕಿನ ಮತ್ತಿಘಟ್ಟದ ಮುಂಡಗನಮನೆ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ರವಿವಾರ ಶ್ರೀಪಾದ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಟಿಎಸ್‌ಎಸ್‌ನ ಅಧ್ಯಕ್ಷ ಹಾಗೂ ಬೆಳೆಸಿರಿ ಕಂಪನಿಯ ನಿರ್ದೇಶಕ ಗೋಪಾಲಕೃಷ್ಣ ವೈದ್ಯ ಮಾತನಾಡಿ, ರೈತರ ಹಿತಾಸಕ್ತಿಗಾಗಿ ಇನ್ನೂ ಹೆಚ್ಚಿನ ಅನುಕೂಲವಾಗಲು ಒಳ್ಳೆಯ ಗುಣಮಟ್ಟದ ಗೊಬ್ಬರಗಳ ಪೂರೈಕೆ, ಕಾರ್ಬನ್ ದೋಟಿ ಸೇವೆ ಮತ್ತು ಕಂಪನಿಯ ನಿಮಿತ್ತ ಒಂದು ಜಾಗವನ್ನು ಖರೀದಿಸಿ, ಅಲ್ಲಿಯೇ ಅಡಿಕೆ ಸುಲಿಯುವ ಯೋಜನೆಯು ಕಾರ್ಯರೂಪದಲ್ಲಿದೆ ಎಂದು ವಿವರಿಸಿದರು.

300x250 AD

ಕಾರ್ಯಕ್ರಮ ಹಾಗೂ ಕಂಪನಿಯ ಅಧ್ಯಕ್ಷ ಶ್ರೀಪಾದ ಪಾಟೀಲ ಮಾತನಾಡಿ, ಸಭೆಯ ನಿರ್ದೇಶಕರು ಹಾಗೂ ಸದಸ್ಯರನ್ನು ಸ್ವಾಗತಿಸಿ, ಕಂಪನಿಯ ವಾರ್ಷಿಕ ವರದಿಯ ಜೊತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಂಪನಿಯ ಉಪಾಧ್ಯಕ್ಷ ಕೃಷ್ಣಮೂರ್ತಿ ದೀಕ್ಷಿತ್ ವಂದಿಸಿದರು. ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಚಿನ್ಮಯ ಹೆಗಡೆ ನಿರ್ವಹಿಸಿದರು. ಕಂಪನಿಯ ಎಲ್ಲ ನಿರ್ದೇಶಕರು ಹಾಗೂ ನೂರಾರು ಸಂಖ್ಯೆಯ ಸದಸ್ಯರು ಸಭೆಯಲ್ಲಿ ಭಾಗಿಯಾಗಿದ್ದರು. ಕಂಪನಿಯಲ್ಲಿರುವ ಮಾರಾಟದ ವಸ್ತುಗಳು ಹಾಗೂ ಸೇವೆಗಳ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದವು.

Share This
300x250 AD
300x250 AD
300x250 AD
Back to top