Slide
Slide
Slide
previous arrow
next arrow

ಹಿಂದೂಗಳ ವಿರುದ್ಧದ ಬೆದರಿಕೆ ಖಂಡಿಸಿದ ಕೆನಡಾ ಪ್ರತಿಪಕ್ಷ ನಾಯಕ

300x250 AD

ಟೊರೆಂಟೋ: ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಯ್ಲಿವ್ರೆ ಅವರು ಕೆನಡಾದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ದ್ವೇಷಪೂರಿತ ಕಾಮೆಂಟ್‌ಗಳನ್ನು ಖಂಡಿಸಿದ್ದಾರೆ. ಕೆನಡಾದ ಪ್ರತಿಯೊಂದು ಭಾಗಕ್ಕೂ ಹಿಂದೂಗಳು ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಹಿಂದೂ ಸಮುದಾಯವನ್ನು ಇಲ್ಲಿ ಯಾವಾಗಲೂ ಸ್ವಾಗತಿಸಲಾಗುತ್ತದೆ ಎಂದಿದ್ದಾರೆ.

ಪ್ರತಿಯೊಬ್ಬ ಕೆನಡಿಯನ್ ದೇಶದಲ್ಲಿ ಭಯವಿಲ್ಲದೆ ಬದುಕಲು ಅರ್ಹರು ಎಂದು ಕನ್ಸರ್ವೇಟಿವ್ ನಾಯಕ ಪೊಯ್ಲಿವ್ರೆ ಹೇಳಿದ್ದಾರೆ. 2019 ರಲ್ಲಿ ಭಾರತದಲ್ಲಿ ನಿಷೇಧಿಸಲ್ಪಟ್ಟ ಖಲಿಸ್ತಾನ್ ಪರ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುನ್, ವೈರಲ್ ವೀಡಿಯೊದಲ್ಲಿ ಭಾರತೀಯ ಮೂಲದ ಹಿಂದೂಗಳಿಗೆ ಬೆದರಿಕೆ ಹಾಕಿ ಕೆನಡಾ ತೊರೆಯುವಂತೆ ಹೇಳಿದ ನಂತರ ಅವರ ಹೇಳಿಕೆಗಳು ಬಂದಿವೆ.

300x250 AD

ಟ್ವಿಟ್‌ ಮಾಡಿರುವ ಪೊಯ್ಲಿವ್ರೆ, “ಪ್ರತಿಯೊಬ್ಬ ಕೆನಡಾದವರು ಭಯವಿಲ್ಲದೆ ಬದುಕಲು ಅರ್ಹರು. ಇತ್ತೀಚಿನ ದಿನಗಳಲ್ಲಿ, ಕೆನಡಾದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಕಾಮೆಂಟ್‌ಗಳನ್ನು ನಾವು ನೋಡಿದ್ದೇವೆ. ಈ ಬೆದರಿಕೆಗಳನ್ನು ಕನ್ಸರ್ವೇಟಿವ್ ಪಕ್ಷ ಖಂಡಿಸುತ್ತದೆ. ಹಿಂದೂಗಳು ನಮ್ಮ ಸ್ನೇಹಿತರು, ನಮ್ಮ ದೇಶದ ಪ್ರತಿಯೊಂದು ಭಾಗಕ್ಕೂ ಹಿಂದೂಗಳು ಅಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಇಲ್ಲಿ ಯಾವಾಗಲೂ ಅವರನ್ನು ಸ್ವಾಗತಿಸಲಾಗುತ್ತದೆ” ಎಂದಿದ್ದಾರೆ.

Share This
300x250 AD
300x250 AD
300x250 AD
Back to top