• Slide
    Slide
    Slide
    previous arrow
    next arrow
  • ಸೆ.12ಕ್ಕೆ ಮೋಟಾರೀಕೃತ ಮೀನುಗಾರಿಕಾ ದೋಣಿಗಳ ಪರಿಶೀಲನೆ

    300x250 AD

    ಕಾರವಾರ: ಜಿಲ್ಲೆಯಲ್ಲಿ ಸೀಮೆಎಣ್ಣೆ ಬಳಸಿ ಔಟ್‌ಬೋರ್ಡ್ ಎಂಜಿನ್ ಮೂಲಕ ಮೀನುಗಾರಿಕೆ ಮಾಡುತ್ತಿರುವ ಎಲ್ಲಾ ದೋಣಿಗಳನ್ನು ಸೆ.12ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಜಿಲ್ಲೆಯಾದ್ಯಂತ ಒಂದೇ ಹಂತದಲ್ಲಿ ತಪಾಸಣೆ ಕೈಗೊಳ್ಳಲಾಗುವುದು.

    ಪರೀಶಿಲನೆಗೆ ಕಾರವಾರ ತಾಲೂಕಿನ ಅಲಿಗದ್ದಾ ಬೀಚ್, ಮಾಜಾಳಿ ಬೀಚ್ ಗೋಟ್ನಿಭಾಗ, ದೇವಭಾಗ, ಮುದಾಗ ಬೀಚ್ ಅಂಕೋಲಾ ತಾಲೂಕಿನ ಹಾರವಾಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಎದುರುಗಡೆ ಬೀಚ್.  ಕುಮಟಾ ತಾಲ್ಲೂಕಿನ ವನ್ನಳ್ಳಿ ಬೀಚ್, ತದಡಿ ಬಂದರು, ಅಳ್ವೆದಂಡೆ, ಶಶಿಹಿತ್ತಲು, ಹೊನ್ನಾವರ ತಾಲ್ಲೂಕಿನ ಟೊಂಕಾ ಕಾಸರಕೋಡ ಬಂದರು, ಮಂಕಿ ಕೋಡಿ ಬೀಚ್, ಭಟ್ಕಳ ತಾಲೂಕಿನ ಮುಂಡಳ್ಳಿ ಬೇಲೆ ಬೀಚ್, ಮುರ್ಡೇಶ್ವರ ಬೀಚ್, ತೆಂಗಿನಗುಂಡಿ ಬಂದರುಗಳಲ್ಲಿ ತಪಾಸಣಾ ನಡೆಸಲಾಗುತ್ತಿದೆ.
    ಈ ವೇಳೆ ತಪ್ಪದೇ ದೋಣಿ ನೋಂದಣಿ ಪ್ರತಿ, ಹಾಲಿ ಇರುವ ಸೀಮೆಎಣ್ಣೆ ಪರ್ಮಿಟ್, ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ ಹಾಜರುಪಡಿಸಬೇಕು. ದೋಣಿ ಮತ್ತು ದೋಣಿಯ ಇಂಜಿನ್ ಸುಸ್ಥಿತಿಯಲ್ಲಿದೆ ಎಂಬುದನ್ನು ತಪಾಸಣಾ ತಂಡಕ್ಕೆ ಖಾತ್ರಿಪಡಿಸಬೇಕು. ತಪಾಸಣೆಗೆ ಒಳಪಡಿಸದ ಸುಸ್ಥಿತಿಯಲ್ಲಿಲ್ಲದ ದೋಣಿಗಳ ನೊಂದಣಿಗಳನ್ನು ಮತ್ತು ನಿಯಂತ್ರಿತ ದರದ ಸೀಮೆಎಣ್ಣೆ ಅನುಮತಿಯನ್ನು ರದ್ದುಗೊಳಿಸಲಾಗುತ್ತದೆ.
    ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಜಂಟಿ ನಿರ್ದೇಶಕರು ಕಾರವಾರ ಹಾಗೂ ಮೀನುಗಾರಿಕೆ ಉಪನಿರ್ದೇಶಕರು ಕಾರವಾರ ಮತ್ತು ಮೀನುಗಾರಿಕೆ ಸಹಾಯಕ ನಿರ್ದೇಶಕರು ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಇವರನ್ನು ಕಚೇರಿಯ ಅವಧಿಯೊಳಗೆ ಸಂಪರ್ಕಿಸಬಹುದೆಂದು ಮೀನುಗಾರಿಕೆ ಜಂಟಿನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top