• Slide
    Slide
    Slide
    previous arrow
    next arrow
  • ದಾನ ಮಾಡಲಾಗದಿದ್ದರೂ ಗೇಲಿ ಮಾಡದಿರಿ:ಶಾಸಕ ಹೆಬ್ಬಾರ್

    300x250 AD

    ಮುಂಡಗೋಡ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿದ ತಾಲೂಕಿನ ಆಟೋ- ಗೂಡ್ಸ್ ರಿಕ್ಷಾ ಮಾಲೀಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ, ರಿಕ್ಷಾ ಪಾಸಿಂಗ್ ಮತ್ತು ಪ್ರಿಂಟಿಂಗ್ ಹುಡ್ ವಿತರಣೆ ಕಾರ್ಯಕ್ರಮವನ್ನು ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು,ಜಿಲ್ಲೆ ಹಾಗೂ ತಾಲೂಕಿನಲ್ಲಿ ಅನೇಕ ಜನರಿಗೆ ದಾನ ಮಾಡುವ ಶಕ್ತಿ ದೇವರು ಕೊಟ್ಟಿದ್ದಾನೆ. ಆದರೆ ದಾನ ಮಾಡುವ ಶಕ್ತಿ ಇಲ್ಲದಿದ್ದರು ಗೇಲಿ ಮಾಡಬಾರದು ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ದಾನ ಮಾಡುವವರ ಪರಿಸ್ಥಿತಿ ಹೇಗೆ ಇರುತ್ತೆ ಎಂದರೆ, ಅವನಿಗೆ ಹಣ ಹೆಚ್ಚಿಗೆಯಾಗಿರಬೇಕು; ಇಲ್ಲಾ ಕಳ್ಳತನದ ಹಣ ಬಂದಿರಬಹುದು ಅಥವಾ ರಾಜಕೀಯಕ್ಕೆ ಸಲ್ಲಬಹುದು ಎಂದು ಇದೇ ಯೋಚನೆ ಮಾಡುತ್ತಾರೆ. ದಾನ ಎಂದರೆ ಹೆಚ್ಚಾಗಿ ಯಾರಿಗೂ ಯಾರೂ ಕೊಡುವುದಿಲ್ಲ. ಒಬ್ಬ ವ್ಯಕ್ತಿಯ ಅವಶ್ಯಕತೆ ಬೇಕಾದಾಗ ನೋಡಿ ಮತ್ತೊಬ್ಬ ವ್ಯಕ್ತಿ ಕೊಡುವಾಗ ಅದು ದಾನ. ಯಾರು ಕೂಡಾ ಯಾರಿಗೂ ಹಣ ಹೆಚ್ಚಾಗಿ ಕೊಡುವುದಿಲ್ಲ. ಪಾಪದ ದುಡ್ಡು ಪಾಪಕ್ಕೆ ಹೊಗುತ್ತದೆ ಹೊರತು ಪುಣ್ಯದ ಕೆಲಸಕ್ಕೆ ಹೊಗುವುದಿಲ್ಲ ಎಂದರು.

    300x250 AD

    ಈ ಸಂದರ್ಭದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಪ್ರಮುಖರಾದ ಶಾರದಾ ಹೆಗಡೆ, ಎಲ್.ಟಿ.ಪಾಟೀಲ್, ಬಸವರಾಜ ಓಶಿಮಠ, ರವಿಗೌಡ ಪಾಟೀಲ್, ಜ್ಞಾನದೇವ ಗುಡಿಯಾಳ, ಗುಡ್ಡಪ್ಪ ಕಾತೂರ, ರಾಬರ್ಟ್ ಲೋಬೋ, ಲವೇಶ ಲಮಾಣಿ ಹಾಗೂ ನಾಗರಾಜ ಕುಲಕರ್ಣಿ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top