• Slide
    Slide
    Slide
    previous arrow
    next arrow
  • ಮಳೆಗಾಗಿ ಪ್ರಾರ್ಥಿಸಿ ಇಂದ್ರೇಶ್ವರ ದೇವರಿಗೆ ಜಲಾಭಿಷೇಕ

    300x250 AD

    ಗೋಕರ್ಣ: ಕೆಲವು ದಿನಗಳಿಂದ ಮಳೆಯಾಗದಿರುವುದರಿಂದಾಗಿ ಕೃಷಿಕರಿಗೆ ಆತಂಕ ಉಂಟಾಗಿದೆ. ಭತ್ತದ ಗದ್ದೆಗಳಿಗೆ ನೀರಿಲ್ಲದೇ ಒಣಗುತ್ತಿದೆ. ಕೆಲವರು ಪಂಪ್ ಮೂಲಕ ನೀರನ್ನು ಹಾಯಿಸುತ್ತಿದ್ದಾರೆ. ಹೀಗಾಗಿ ಮಳೆಯಾಗಲು ಈಗ ಎಲ್ಲೆಡೆ ಜನರು ದೇವರ ಮೊರೆ ಹೋಗುವಂತಾಗಿದೆ.

    ಶ್ರೀ ಕ್ಷೇತ್ರ ಗೋಕರ್ಣದಲ್ಲಿಯೂ ಕೂಡ ಈಗ ಭಕ್ತರು ದೇವರ ಮೊರೆ ಹೋಗಿದ್ದು, ಉಪಾದಿವಂತ ಮಂಡಳ ಮೈತ್ರೇಯಿ ಮಹಿಳಾ ಮಂಡಳ, ಮಹಾಬಲೇಶ್ವರ ಮಂದಿರದ ಸಿಬ್ಬಂದಿಗಳು ಹಾಗೂ ಸ್ಥಳೀಯ ಭಕ್ತರು ಸೇರಿ ಮಳೆಗಾಗಿ ಪ್ರಾರ್ಥಿಸಿ ಇಂದ್ರೇಶ್ವರ ದೇವರಿಗೆ ಜಲಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿದರು.

    ಹಲವೆಡೆ ಮಳೆ ಅಭಾವದಿಂದ ತತ್ತರಿಸುತ್ತಿರುವ ಸಂದರ್ಭಗಳಲ್ಲಿ ಲೋಕ ಕಲ್ಯಾಣಾರ್ಥವಾಗಿ ಪ್ರಾರ್ಥಿಸಿದರೆ, ಶ್ರೀ ದೇವರಿಗೆ ಪೂಜೆ ಸಲ್ಲಿಸಿದರೆ ಮಳೆಯಾಗುತ್ತದೆ ಎಂಬ ಪ್ರತೀತಿ ಇದೆ. ಈ ಹಿಂದೆಯೂ ಕೂಡ ಮಳೆಯಾಗದ ಸಂದರ್ಭದಲ್ಲಿ ಪೂಜೆ ಸಲ್ಲಿಸಿದ ನಂತರ ಮಳೆಯಾದ ಉದಾಹರಣೆಯಿದೆ. ಹೀಗಾಗಿ ಇಂದ್ರೇಶ್ವರ ದೇವರಿಗೆ ಜಲಾಭಿಷೇಕ ಮಾಡಿ ಮಳೆ ಸುರಿಯುವಂತೆ ಭಕ್ತಿಯಿಂದ ಬೇಡಿಕೊಂಡರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top