Slide
Slide
Slide
previous arrow
next arrow

ರಸ್ತೆ, ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರಿಗೆ ಒತ್ತಾಯ

300x250 AD

ಗೋಕರ್ಣ : ಇಲ್ಲಿಯ ಸಮೀಪದ ಮೊರಬಾ ಗ್ರಾಮದ ಗುಡಿಸಿದ್ದ ಹರಿಕಂತ್ರ ಸಂಘದವರು ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ಬುಧವಾರ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಮೊರಬಾದ ನಾರಾಯಣ ಶಿವು ಹರಿಕಂತ್ರ ಮನೆಯಿಂದ ಬೀರಪ್ಪ ಹುರಿಯಪ್ಪ ಹರಿಕಂತ್ರ ಅವರ ಮನೆಯವರೆಗೆ ರಸ್ತೆ ಮತ್ತು ಚರಂಡಿ ಹದಗೆಟ್ಟಿದ್ದು ಇದರಿಂದ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತಿದೆ. ಜನವಸತಿ ಪ್ರದೇಶ ಹಾಗೂ ಕೃಷಿ ಭೂಮಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಇದನ್ನು ದುರಸ್ಥಿಗೊಳಿಸಲು ಅನುದಾನ ನೀಡಬೇಕು ಎಂದು ದೂರು ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

300x250 AD

ಗುಡಿಸಿದ್ದ ಹರಿಕಂತ್ರ ಸಂಘದ ಅಧ್ಯಕ್ಷ ನಾರಾಯಣ ಶಿವು ಹರಿಕಂತ್ರ, ಉಪಾಧ್ಯಕ್ಷ ಶೇಖರ ಮಹಾದೇವ ಹರಿಕಂತ್ರ, ಕಾರ್ಯದರ್ಶಿ ಗಜಾನನ ತಿಮ್ಮಯ್ಯ ಹರಿಕಂತ್ರ, ಮೀನುಗಾರರ ಹಿತರಕ್ಷಣೆ ವೇದಿಕೆಯ ಅಧ್ಯಕ್ಷ ಮಂಜುನಾಥ ಹರಿಕಂತ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top