• Slide
    Slide
    Slide
    previous arrow
    next arrow
  • ಉಪನ್ಯಾಸಕಿ ಪೂರ್ಣಿಮಾ ದೀಕ್ಷಿತ್ ಇನ್ನಿಲ್ಲ

    300x250 AD

    ಶಿರಸಿ: ಸಮೀಪದ ಗಡಿಹಳ್ಳಿ ನಿವಾಸಿ ಶ್ರೀಮತಿ ರೇಖಾ ಮತ್ತು ಶಿವಾನಂದ ದೀಕ್ಷಿತ (ವಿಶ್ರಾಂತ ಸಿಂಡಿಕೇಟ ಬ್ಯಾಂಕ್ ಮತ್ತು ಸಿ.ಬಿ.ಐ. ಅಧಿಕಾರಿ) ಇವರ ಸೊಸೆ ಮತ್ತು ಮೋಟಿನ್ಸರದ ಶ್ರೀಮತಿ ರೇಖಾ ಮತ್ತು ಸುಬ್ರಾಯ ಹೆಗಡೆ ಪುತ್ರಿ ಶ್ರೀಮತಿ ಪೂರ್ಣಿಮಾ ಪ್ರಶಾಂತ ದೀಕ್ಷಿತ್(34) ಮೊನ್ನೆ ಜು. 18ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ನಿಧನರಾಗಿದ್ದಾರೆ.

    ಬೆಂಗಳೂರಿನಲ್ಲಿ ಉಪನ್ಯಾಸಕಿಯಾಗಿರುವ ಪೂರ್ಣಿಮಾ ತಮ್ಮ ಮೂರೂವರೆ ವರ್ಷದ ಪುತ್ರಿಯನ್ನು ಶಾಲೆಗೆ ಬಿಟ್ಟು, ವೈದ್ಯ ಪತಿಯನ್ನು ಮೆಟ್ರೋ ಸ್ಟೇಶನ್ ಹೊರಗೆ ಬಿಟ್ಟು ಹಿಂತಿರುಗುವಾಗ ವೈಟಫೀಲ್ಡ್ ಫ್ಲೈ ಓವರ್ ಬಳಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲೇ ಅಸುನೀಗಿದ್ದಾರೆ. ಇವರು ಕೆಲ ವರ್ಷಗಳ ಕಾಲ ಶಿರಸಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top