• Slide
    Slide
    Slide
    previous arrow
    next arrow
  • ಬಾಬು ಜಗಜೀವನರಾಂ ಪುಣ್ಯ ತಿಥಿ ಆಚರಣೆ

    300x250 AD

    ಶಿರಸಿ: ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗ ಮತ್ತು ಶಿರಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಆಶ್ರಯದಲ್ಲಿ ಮಾಜಿ ಉಪ ಪ್ರಧಾಮಂತ್ರಿ ದಿವಂಗತ ಬಾಬು ಜಗಜೀವನರಾಂರವರ 37ನೇ ಪುಣ್ಯ ತಿಥಿಯನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

    ಈ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಬಸವರಾಜ ದೊಡ್ಮನಿ ಮಾತನಾಡಿ, ಬಾಬು ಜಗಜೀವನರಾಂ ರವರು ಉಪಪ್ರಧಾನಿಯಾಗಿ ಈ ದೇಶದ ರಕ್ಷಣಾ ಮಂತ್ರಿಯಾಗಿ,ಕ್ರಷಿ ಮಂತ್ರಿಯಾಗಿ, ಸೇವೆಯನ್ನು ಸಲ್ಲಿಸಿ ಹಸಿರುಕ್ರಾಂತಿಯ ಹರಿಕಾರರಾಗಿ ದಲಿತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ದಿಮಂತ ನಾಯಕರು ಎಂದು ಹೇಳಿದರು.

    300x250 AD

    ಈ ಸಂದರ್ಭದಲ್ಲಿ ಶಿರಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ ಚಂದ್ರಕಾಂತ ಡಿ.ರೇವಣಕರ್, ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರಾದ ರಘು ಕಾನಡೆ, ಮುಖಂಡರಾದ ಬಾಲಕೃಷ್ಣ ಪಾಲೆಕರ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶೈಲೇಶ್ ಗಾಂಧಿ, ಮುಖಂಡರಾದ ಶಾಂತಾರಾA ನಾಯ್ಕ, ಉಮೇಶ್ ಪಾವಸ್ಕರ್, ನಾಗರತ್ನ ಜೋಗಳೆಕರ್, ಪ್ರಕಾಶ್ ಗೌಡ, ರಾಜೇಶ್ ದೇಶಭಾಗ್ ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top