• Slide
    Slide
    Slide
    previous arrow
    next arrow
  • ಗೋ ಹತ್ಯೆ ಪ್ರಕರಣ: ಕಾಗೇರಿ ಖಂಡನೆ

    300x250 AD

    ಶಿರಸಿ: ಹೆಗಡೆಕಟ್ಟಾದಲ್ಲಿ ಗೋಹತ್ಯೆ ಮಾಡಿ ಗೋವಿನ ತಲೆಯನ್ನು ರಸ್ತೆಯಲ್ಲಿ ಎಸೆದ ಹೃದಯ ವಿದ್ರಾವಕ ಘಟನೆಯನ್ನು ಮಾಜಿ ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರವಾಗಿ ಖಂಡಿಸಿದ್ದಾರೆ.

    ಸಮಾಜದಲ್ಲಿ ಸಾಮರಸ್ಯ ಕದಡುವ ಪ್ರಯತ್ನ ಇದಾಗಿದೆ. ಹಿಂದೂಗಳ ಶ್ರದ್ಧೆಗೆ ಧಕ್ಕೆ ತರುವಂತಹ ಇಂತಹ ಘಟನೆಗಳನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂಯೇತರ ಸಮುದಾಯದ ಹಿರಿಯರು ಇಂತಹ ಘಟನೆಯನ್ನು ವಿರೋಧಿಸಿ, ಸಾಮರಸ್ಯ ಮೂಡಿಸುವ ಪ್ರಯತ್ನ ಮಾಡಬೇಕಿದೆ. ಮುಂದಿನ ದಿನದಲ್ಲಿ ಗೋಹತ್ಯೆಯಂತಹ ಕೃತ್ಯಗಳು ನಡೆಯದಂತೆ ತಮ್ಮ ಮತಾನುಯಾಯಿಗಳಿಗೆ ಕಟ್ಟುನಿಟ್ಟಾಗಿ ತಿಳಿಸಬೇಕಿದೆ. ಪ್ರಸ್ತುತ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಎಲ್ಲ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗೋಹತ್ಯೆ ನಡೆಸುತ್ತಿರುವವರನ್ನು ಹುಡುಕಿ ಕಠಿಣ ಶಿಕ್ಷೆಗೆ ಗುರಿಪಡಿಸುವಲ್ಲಿ ತಮ್ಮ ಕಾಳಜಿಯನ್ನು ತೋರಬೇಕಿದೆ ಎಂದು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top