• Slide
    Slide
    Slide
    previous arrow
    next arrow
  • ಜಾನುವಾರು ವಿಮೆ ಹಣವನ್ನು ಆಕಳ ಖರೀದಿಗೆ ಬಳಸಿಕೊಳ್ಳಿ: ಸುರೇಶ್ಚಂದ್ರ ಹೆಗಡೆ

    300x250 AD

    ಶಿರಸಿ: ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಜಡ್ಡಿಗದ್ದೆಯ ಹಾಲು ಉತ್ಪಾದಕರ ಆಕಳುಗಳು ಮರಣ ಹೊಂದಿದ ಕಾರಣ ಚೆಕ್‌ ವಿತರಿಸಿ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಮಾತನಾಡಿದರು.

    ಈಗಾಗಲೇ ಆಕಸ್ಮಿಕವಾಗಿ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ವಿಮಾ ಹಣವನ್ನು ವಿತರಿಸಲಾಗಿದ್ದು, ವಿಮಾ ಹಣವನ್ನು ಪಡೆದ ರಾಸುಗಳ ಮಾಲೀಕರು ಆ ವಿಮಾ ಹಣದ ಮೂಲಕ ಇನ್ನೊಂದು ಆಕಳನ್ನು ಖರೀದಿಸಿ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡುವಂತಾಗಿ ಕೆ.ಎಂ.ಎಫ್‌ ನ ಪ್ರಗತಿಯಲ್ಲಿ ಹಾಗೂ ನಮ್ಮ ಜಿಲ್ಲೆಯ ಹೈನುಗಾರಿಕೆ ಎಂಬ ಸಹಕಾರ ಸಂಘಟನೆಯೊಂದಿಗೆ ಕೈಜೋಡಿಸುವಂತಾಗಬೇಕು ಎಂದು ಕರೆ ನೀಡಿದರು.

    ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರುಗಳಾದ ಹರಿಹರ ಎನ್‌. ಭಟ್‌, ಮಹಾಬಲೇಶ್ವರ ಜಿ.ಭಟ್‌ ಹಾಗೂ ಗಣಪತಿ ಆರ್‌. ಚಲವಾದಿ ಇವರುಗಳ ಆಕಳುಗಳು ಮರಣ ಹೊಂದಿದ ಕಾರಣ ತಲಾ ರೂ.40,000/-, ರೂ.30,000/-, ಹಾಗೂ ರೂ.30,000/-, ಮೊತ್ತದ ಚೆಕ್‌ಗಳನ್ನು ಮೃತ ಜಾನುವಾರುಗಳ ಫಲಾನುಭವಿಗಳಿಗೆ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಜಾನುವಾರು ವಿಮಾ ಯೋಜನೆಯ ಅಡಿಯಲ್ಲಿ ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಜಡ್ಡಿಗದ್ದೆಯಲ್ಲಿ ವಿತರಿಸಿದರು.

    300x250 AD

    ರಾಜ್ಯಾದಂತ ಹಾಲು, ಮೊಸರು, ಬೆಣ್ಣೆ, ತುಪ್ಪ ಹಾಗೂ ಹಾಲಿನ ಇನ್ನಿತರ ವಸ್ತುಗಳ ಮೇಲಿನ ಬೇಡಿಕೆ ಗಣನೀಯವಾಗಿ ಹೆಚ್ಚಳವಾಗಿದ್ದು, ಬೇಡಿಕೆಗೆ ಅನುಗುಣವಾಗಿ ಹಾಲಿನ ಶೇಖರಣೆ ಆಗದೇ ಇರುವುದರಿಂದ ಮಾರುಕಟ್ಟೆಯ ಬೇಡಿಕೆ ಎಷ್ಟಿದೆಯೋ ಅಷ್ಟೇ ಪ್ರಮಾಣದಲ್ಲಿ ಹಾಲನ್ನು ಪೂರೈಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಆದ ಕಾರಣ ತಾವುಗಳು ಹೈನುಗಾರಿಕೆಯಿಂದ ವಿಮುಖರಾಗದೇ ಜಾನುವಾರು ವಿಮಾ ಯೋಜನೆಯಿಂದ ದೊರಕಿದ ಹಣದಲ್ಲಿ ಮತ್ತೊಂದು ಆಕಳನ್ನು ಖರೀದಿಸಿ ಇನ್ನೂ ಹೆಚ್ಚಿನ ಹಾಲಿನ ಉತ್ಪಾದನೆ ಮಾಡುವಂತಾಗಬೇಕು ಎಂದು ಈ ಮೂಲಕ ಅವರು ವಿನಂತಿಸಿದರು. ತಮ್ಮ ಎಲ್ಲಾ ಜಾನುವಾರುಗಳಿಗೆ ಕೂಡಲೇ ವಿಮೆಯನ್ನು ಮಾಡಿಸಬೇಕು. ಒಂದು ವರ್ಷದ ಹಿಂದೆ ಈಗಾಗಲೇ ವಿಮೆಯನ್ನು ಮಾಡಿಸಲಾದ ಜಾನುವಾರುಗಳಿಗೆ ನಮ್ಮ ಒಕ್ಕೂಟದ ಪಶುವೈದ್ಯರನ್ನು ಸಂಪರ್ಕಿಸಿ ಜಾನುವಾರು ವಿಮೆಯನ್ನು ನವೀಕರಣಗೊಳಿಸಿಕೊಳ್ಳಬೇಕು ಎಂದರು.

    ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ಮೌನೇಶ ಎಂ. ಸೋನಾರ, ವಿಸ್ತರಣಾ ಸಮಾಲೋಚಕರಾದ ಅಭಿಷೇಕ ನಾಯ್ಕ, ಜಯಂತ ಪಟಗಾರ, ಜಡ್ಡಿಗದ್ದೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿನಾಯಕ ಹೆಗಡೆ ಮುಖ್ಯಕಾರ್ಯನಿರ್ವಾಹಕರಾದ ವಿನಾಯಕ ಹೆಗಡೆ, ಸಂಘದ ಆಡಳಿತ ಮಂಡಳಿಯ ಸದಸ್ಯರು, ಜಾನುವಾರು ವಿಮಾ ಯೋಜನೆಯ ಫಲಾನುಭವಿಗಳು ಹಾಗೂ ಹಾಲು ಉತ್ಪಾದಕರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top