Slide
Slide
Slide
previous arrow
next arrow

ಕಾರು ಡಿಕ್ಕಿ; ಸ್ಕೂಟರ್ ಸವಾರ ಸಾವು

300x250 AD

ಹೊನ್ನಾವರ: ಕಾರು ಚಾಲಕ ಅತೀವೇಗ ಹಾಗೂ ನಿಷ್ಕಾಳಜಿಯಿಂದ ವಾಹನ ಚಲಾಯಿಸಿ ರಸ್ತೆ ಬದಿಯಲ್ಲಿ ಸ್ಕೂಟಿಯಲ್ಲಿ ಸಹಸವಾರನೊಂದಿಗೆ ನಿಲ್ಲಿಸಿಕೊಂಡಿದ್ದ ವೇಳೆ ಡಿಕ್ಕಿಪಡಿಸಿದ್ದು, ಘಟನೆಯಿಂದ ಸ್ಕೂಟರ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.
ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಕರ್ಕಿ ಮಠದಕೇರಿ ಸಮೀಪ ಘಟನೆ ನಡೆದಿದ್ದು ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ವಾಹನ ಚಲಾಯಿಸುತ್ತಿದ್ದ.ಈ ವೇಳೆ ಸ್ಕೂಟಿಗೆ ಡಿಕ್ಕಿ ಪಡಿಸಿದ್ದಾನೆ. ಆರೋಪಿತ ಕಾರು ಚಾಲಕ ಮಹಾರಾಷ್ಟç ರಾಜ್ಯದ ಪುನೈ ಜಿಲ್ಲೆ ಹವೇಲಿ ಲೋಗಾವ್ ನಿವಾಸಿ ಧ್ಯಾನೇಶ್ವರ ರಾಮಚಂದ್ರ ಖಾಂಡವೆ ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ಸ್ಕೂಟಿ ಸವಾರ ಪಟ್ಟಣದ ದುರ್ಗಾಕೇರಿ ನಿವಾಸಿ ತುಳಸಿದಾಸ ಬಾಬು ಪ್ರಭು ಅವರಿಗೆ ಗಂಭೀರ ಗಾಯ ನೋವಾಗಿತ್ತು. ಹಿಂಬದಿ ಸವಾರ ಕರ್ಕಿ ರಾಮೇಶ್ವರ ಕಂಬಿಯ ರವಿ ತಿಮ್ಮಪ್ಪ ನಾಯ್ಕ ಅವರು ಸಹ ಗಾಯಾಳುವಾಗಿದ್ದಾರೆ. ಗಂಭೀರ ಗಾಯಗೊಂಡಿದ್ದ ತುಳಸಿದಾಸ ಬಾಬು ಪ್ರಭು (76) ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top