• Slide
    Slide
    Slide
    previous arrow
    next arrow
  • ಸಂಗೀತ ವಿಶಾರದ ಪರೀಕ್ಷೆ: ಸಂಧ್ಯಾ ಭಟ್ ದೇಶಕ್ಕೆ ಪ್ರಥಮ

    300x250 AD

    ಶಿರಸಿ: ದೇಶದ ಪ್ರತಿಷ್ಠಿತ ಸಂಸ್ಥೆ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ಮುಂಬೈ ನಡೆಸುವ ಸಂಗೀತ ವಿಶಾರದ ಪರೀಕ್ಷೆಯಲ್ಲಿ ಡಾ. ಸಂಧ್ಯಾ ಭಟ್ ದೇಶಕ್ಕೆ ಪ್ರಥಮ ಸ್ಥಾನ ಪಡೆದು ಅನುಪಮ ಸಾಧನೆ ಮಾಡಿದ್ದಾರೆ.
    ಬಾಬಾ ಸಾಹೇಬ್ ಅಂಬೇಡ್ಕರ್ ಮುಕ್ತ ವಿಶ್ವವಿದ್ಯಾಪೀಠ ಅಹಮದಾಬಾದ್ ಕುಲಗುರು ಡಾ. ಅಮೀ ಉಪಾಧ್ಯಾಯ ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
    ಸಂಧ್ಯಾ ಭಟ್ಟ ತಾಲೂಕಿನ ಹೆಗ್ಗರ್ಸಿಮನೆಯ ವೇದಮೂರ್ತಿ ಸತ್ಯನಾರಾಯಣ ಭಟ್ ಹಾಗು ದಾಕ್ಷಾಯಿಣಿ ಭಟ್ ಇವರ ಪುತ್ರಿಯಾಗಿದ್ದಾರೆ. ಪ್ರಸ್ತುತ ಸಂಧ್ಯಾ ಭಟ್ ಮೈಸೂರಿನಲ್ಲಿನ
    ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ಉಲ್ಲೇಖನೀಯ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top