Slide
Slide
Slide
previous arrow
next arrow

ಹಾವು ಕಚ್ಚಿ ರೈತ ಸಾವು

300x250 AD

ಮುಂಡಗೋಡ: ತಾಲೂಕಿನ ಇಂದೂರ ಗ್ರಾಮದ ರೈತನೊಬ್ಬ ವಿಷಸರ್ಪ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ರವಿವಾರ ಮೃತಪಟ್ಟಿದ್ದಾನೆ.

ಮಹಮ್ಮದ್ ಅಲಿ (64) ಮೃತಪಟ್ಟ ರೈತ. ಈತನು ಶುಕ್ರವಾರ ಸಂಜೆ ಅವರ ಬಾಳೆ ಮತ್ತು ಅಡಿಕೆ ತೋಟದಲ್ಲಿ ಕಳೆ ತೆಗೆಯುತ್ತಿದ್ದಾಗ ಯಾವುದೋ ವಿಷಸರ್ಪ ಕಚ್ಚಿದೆ. ಬಸಾಪುರ ಗ್ರಾಮದಲ್ಲಿ ಈತನಿಗೆ ನಾಟಿ ಔಷಧಿ ಕೊಡಿಸಿ ಉಪಚಾರ ಮಾಡುತ್ತಿದ್ದಾಗ ಹಾವು ಕಚ್ಚಿದ ಗಾಯ ಉಲ್ಬಣಗೊಂಡಿದೆ. ನಂತರ ರವಿವಾರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

300x250 AD
Share This
300x250 AD
300x250 AD
300x250 AD
Back to top