Slide
Slide
Slide
previous arrow
next arrow

ಜೆಡಿಎಸ್ ಕಾರ್ಯಕರ್ತರ ಸಭೆ: ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ ಉಪೇಂದ್ರ ಪೈ

300x250 AD

ಶಿರಸಿ : ಶಿರಸಿಯ ಸಿಪಿ ಬಜಾರ್ ‘ಅಮ್ಮ ಆರ್ಕೇಡ್’ ಸಂಕಿರ್ಣದಲ್ಲಿ ಆರ್. ಜಿ. ನಾಯ್ಕ ಕಿಬ್ಬಳ್ಳಿ ಅಧ್ಯಕ್ಷತೆಯಲ್ಲಿ ಜಾತ್ಯಾತೀತ ಜನತಾ ದಳದ ಗ್ರಾಮೀಣ ಮಟ್ಟದ ಕಾರ್ಯಕರ್ತರ ಸಭೆ ನಡೆಯಿತು. ಶಿರಸಿ – ಸಿದ್ದಾಪುರ ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಉಪೇಂದ್ರ ಪೈ ಮಾತನಾಡಿ ಈ ಪಕ್ಷ ನನ್ನನ್ನು ಕರೆದು ಗುರುತಿಸಿ ಅವಕಾಶ ಕೊಟ್ಟಿದಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ರಾಜ್ಯಾಧ್ಯಕ್ಷ ಸಿ.ಎಮ್. ಇಬ್ರಾಹಿಂ ಹಾಗೂ ಪಕ್ಷದ ಎಲ್ಲ ಪ್ರಮುಖರಿಗೆ ಹೃತ್ಪೂರ್ವಕ ಅಭಿನಂದಿಸಿದರು. ಪಕ್ಷದ ಸಂಘಟನೆಯ ಹಾಗೂ ಚುನಾವಣೆಯ ಕುರಿತು ಕೆಲವು ಸಲಹೆ ಸೂಚನೆಗಳನ್ನು ನೀಡುವುದರ ಜೊತೆಗೆ ಮುಂದಿನ ಪಕ್ಷದ ಸಂಘಟನೆಗಾಗಿ ಸಭೆ ಕರೆಯುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಾಸುದೇವ್ ಮಾಡಗೆರಿ, ಜುಬೇರ ಜುಕಾಕೋ, ಶೀಲು ವಾಝ, ಅರುಣ್ ಗೌಡ, ಆದರ್ಶ ನಾಯ್ಕ, ಶೇಖರ್ ಪೂಜಾರಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 

300x250 AD
Share This
300x250 AD
300x250 AD
300x250 AD
Back to top