• Slide
    Slide
    Slide
    previous arrow
    next arrow
  • ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ: ಶಿರಸಿ,ಸಿದ್ದಾಪುರ ವಿದ್ಯಾರ್ಥಿಗಳ ಸಾಧನೆ

    300x250 AD

    ಸಿದ್ದಾಪುರ: ಶಿವಮೊಗ್ಗದ ರೋಟರಿ ಕ್ಲಬ್‌ನ ಸಭಾಂಗಣದಲ್ಲಿ ನಡೆದ ಮೂರನೇ ರಾಜ್ಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಚಾಂಪಿಯನ್ಸ್ ಡೊಜೊ ಶಿರಸಿ ಹಾಗೂ ಸಿದ್ದಾಪುರ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಭಾಗವಹಿಸಿ ಎರಡು ಚಿನ್ನದ ಪದಕ, ಆರು ಬೆಳ್ಳಿ ಪದಕ, ಮೂರು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
    ಸಿದ್ದಾಪುರ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ಖುಷಿ ಎರಡು ಕಂಚಿನ ಪದಕ, ಸಿದ್ದಾರ್ಥ ಎರಡು ಬೆಳ್ಳಿ ಪದಕ, ಶಿರಸಿ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳಾದ ತನ್ಮಯ್ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ, ನೀರಜ್ ಒಂದು ಕಂಚಿನ ಪದಕ, ಸಿಂಚನ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ, ಪ್ರಿಯಾಲ್ 2 ಬೆಳ್ಳಿ ಪದಕಗಳನ್ನು ಪಡೆದುಕೊಂಡು ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದಾರೆ.

    ಇವರುಗಳಿಗೆ ಕರಾಟೆ ತರಬೇತುದಾರರಾದ ಆನಂದ್ ನಾಯ್ಕ್ ತರಬೇತಿಯನ್ನು ನೀಡಿದ್ದು, ಇವರ ಸಾಧನೆಗೆ ವಿದ್ಯಾರ್ಥಿಗಳ ತಂದೆ- ತಾಯಿಗಳು ಹಾಗೂ ಊರಿನ ಗಣ್ಯರುಗಳು ಸಂತಸ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top