• Slide
    Slide
    Slide
    previous arrow
    next arrow
  • ಮಾರ್ಚ್ ಮೊದಲ ವಾರದಲ್ಲಿ ಕರಾವಳಿ ಉತ್ಸವ ಆಯೋಜನೆಗೆ ತೀರ್ಮಾನ

    300x250 AD

    ಕಾರವಾರ: ಜಿಲ್ಲೆಯ ಅತಿದೊಡ್ಡ ಹಾಗೂ ವಿಜೃಂಭಣೆಯಿಂದ ನಡೆಯುವ ಕರಾವಳಿ ಉತ್ಸವವನ್ನು ಮಾರ್ಚ್ ಮೊದಲ ವಾರದಲ್ಲಿ ನಡೆಸಲು ಮುಂದಾಗಲಾಗಿದೆ.
    ಈ ಹಿಂದೆಯೇ 2-3 ಬಾರಿ ಉತ್ಸವ ನಡೆಸಲು ಸಭೆ ನಡೆದಿದ್ದರೂ ದಿನಾಂಕ ಹೊಂದಾಣಿಕೆ ಹಾಗೂ ಅನುದಾನದ ಕುರಿತಾಗಿ ಒಮ್ಮತ ಬಾರದ ಕಾರಣ ಮುಂದೂಡಲಾಗಿತ್ತು. ಆದರೆ ಅಂತಿಮವಾಗಿ ಮಾರ್ಚ್ ಮೊದಲ ವಾರದಲ್ಲೇ ಉತ್ಸವ ಆಯೋಜಿಸಲು ತೀರ್ಮಾನಿಸಲಾಗಿದ್ದು, ಈ ಕುರಿತು ಶಾಸಕಿ ರೂಪಾಲಿ ನಾಯ್ಕ ಹೆಚ್ಚು ಆಸಕ್ತಿ ತೋರಿದ್ದಾರೆನ್ನಲಾಗಿದೆ.
    ಜಿಲ್ಲೆಯಲ್ಲಿ ಹಾಗೂ ಇತರ ಜಿಲ್ಲೆಗಳಲ್ಲಿ ಉತ್ಸವಗಳು ನಡೆಯುತ್ತಿದ್ದು, ಜಿಲ್ಲಾ ಕೇಂದ್ರ ಕಾರವಾರದಲ್ಲಿ ಮಾತ್ರ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗೆಲ್ಲ ಉತ್ಸವ ಆಯೋಜನೆಯಾಗುವುದಿಲ್ಲ ಎಂಬ ಕಪ್ಪುಚುಕ್ಕೆ ಇದೆ. ಆದರೆ ಈ ಬಾರಿ ಈ ಆರೋಪದಿಂದ ಮುಕ್ತವಾಗಬೇಕೆಂದು ಶಾಸಕಿ ತೀರ್ಮಾನಿಸಿದ್ದು, ಮಾರ್ಚ್ನಲ್ಲಿ ಉತ್ಸವ ಆಯೋಜನೆ ಬಹುತೇಕ ಪಕ್ಕಾ ಆದಂತಿದೆ.ಉತ್ಸವಕ್ಕೆ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಗೂ ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಆಗಮಿಸುವ ಸಾಧ್ಯತೆ ಇದ್ದು, ಕಾರ್ಯಕ್ರಮಗಳ ಪಟ್ಟಿ ಇನ್ನಷ್ಟೆ ಅಧಿಕೃತವಾಗಬೇಕಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top