Slide
Slide
Slide
previous arrow
next arrow

ಅಕ್ರಮ ಮದ್ಯ ಸಾಗಾಟ: ಕಾರಿನ ಜೊತೆ ಓರ್ವ ವಶಕ್ಕೆ, ಇನ್ನೋರ್ವ ಪರಾರಿ

300x250 AD

ದಾಂಡೇಲಿ: ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ಮಾಲು ಸಹಿತ ವಶಕ್ಕೆ ಪಡೆದು ಓರ್ವನನ್ನು ಬಂಧಿಸಿದ ಘಟನೆ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ನಡೆದಿದೆ ಎಂಬ ಮಾಹಿತಿ ನಗರದ ಅಬಕಾರಿ ಇಲಾಖೆಯಿಂದ ಲಭ್ಯವಾಗಿದೆ.
ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿಕೊಂಡು ಬರುತ್ತಿದ್ದ ಕೆಎ:25, ಎಬಿ:2863 ಸಂಖ್ಯೆಯ ಸ್ವಿಪ್ಟ್ ಡಿಸೈರ್ ವಾಹನವನ್ನು ಖಚಿತ ಮಾಹಿತಿಯನ್ನಾಧರಿಸಿ ಅನಮೋಡ ಅಬಕಾರಿ ತನಿಖಾ ಠಾಣೆಯ ಹತ್ತಿರ ಅಬಕಾರಿ ರಕ್ಷಕರಾದ ಉಳುವೇಶ್ ಅವರು ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಸಾಗಾಟ ಬೆಳಕಿಗೆ ಬಂದಿದೆ. ಈ ಸಂದರ್ಭದಲ್ಲಿ ವಾಹನದಲ್ಲಿದ್ದ 750 ಮಿಲಿಯ ಓಲ್ಡ್ ಬಿಲ್ ಎಕ್ಸ್ಟ್ರಾ ಸ್ಪೇಷಲ್ ವಿಸ್ಕಿಯ 100 ಪ್ಲಾಸ್ಟಿಕ್ ಬಾಟಲಿಗಳು ಪತ್ತೆಯಾಗಿದೆ. ತಕ್ಷಣವೆ ಅಕ್ರಮ ಗೋವಾ ಮದ್ಯ ಹಾಗೂ ವಾಹನವನ್ನು ವಶಪಡಿಸಿಕೊಂಡು, ಕಾರಿನಲ್ಲಿದ್ದ ಅಮಿತ್ ಚೇತನ್ ಸಾಂಗ್ಲಿಕರ ಈತನನ್ನು ಬಂಧಿಸಲಾಗಿದೆ. ವಾಹನ ಚಾಲಕ ಪರಾರಿಯಾಗಿದ್ದಾನೆ.
ಅಬಕಾರಿ ಇಲಾಖೆ ನೀಡಿದ ಪ್ರಕಟಣೆಯಲ್ಲಿ ಈ ಕರ‍್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾದ ವನಜಾಕ್ಷಿ ಎಂ. ಅವರ ನಿರ್ದೇಶನದ ಮೇರೆಗೆ ಅಬಕಾರಿ ಉಪಾಧೀಕ್ಷಕರಾದ ಶಂಕರಗೌಡ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ಗಣೇಶ್ ನಾಯ್ಕ, ಅಬಕಾರಿ ಉಪ ನಿರೀಕ್ಷಕರುಗಳಾದ ಮಂಜುನಾಥ್ ಜೋಗಳೇಕರ್ ಮತ್ತು ಶ್ರೀಕಾಂತ.ಬಿ.ಅಸೋದೆ ಹಾಗೂ ಸಿಬ್ಬಂದಿಗಳಾದ ಸಿ.ಪಿ.ರಾಥೋಡ್, ಪ್ರಸನ್ನ ನೇತ್ರೇಕರ್ ಮತ್ತು ಧ್ರುವರಾಜ್ ಅವರು ಕರ‍್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದೆ. ಇಷ್ಟೆಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿರುವಾಗ ಕಾರಿನ ಚಾಲಕ ಪರಾರಿಯಾಗಿರುವುದು ಅಬಕಾರಿ ಅಧಿಕಾರಿಗಳ ಕರ್ತವ್ಯಬದ್ಧತೆಯನ್ನು ಪ್ರಶ್ನಿಸುವಂತಾಗಿದೆ. ಅನಮೋಡ ಅಬಕಾರಿ ಠಾಣೆಯ ವ್ಯಾಪ್ತಿಯಲ್ಲಿ ಪಾರದರ್ಶಕವಾಗಿ ಗೋವಾದಿಂದ ಬರುವ ವಾಹನಗಳ ಪರಿಶೀಲನೆ ಕರ‍್ಯ ನಡೆಸಿದ್ದಲ್ಲಿ ದಿನವೊಂದಕ್ಕೆ 25 ಕ್ಕೂ ಅಧಿಕ ಅಕ್ರಮ ಮದ್ಯ ಸಾಗಾಟ ಪ್ರಕರಣಗಳನ್ನು ಭೇಧಿಸಬಹುದಾಗಿದ್ದು, ಅಬಕಾರಿ ಅಧಿಕಾರಿಗಳಿಗೆ ಆ ಇಚ್ಚಾಶಕ್ತಿ ಬರಬೇಕಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

300x250 AD
Share This
300x250 AD
300x250 AD
300x250 AD
Back to top