Slide
Slide
Slide
previous arrow
next arrow

ಜ.31ಕ್ಕೆ ಸಹಕಾರ ರತ್ನ ಪುರಸ್ಕೃತರುಗಳಿಗೆ ‘ಅಭಿನಂದನಾ ಸಮಾರಂಭ’

300x250 AD

ಶಿರಸಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರು ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ, ಕುಮಟಾ, ಸಹಕಾರ ಇಲಾಖೆ ಹಾಗೂ ಕೃಷಿ ಕೃಷಿಕ ಹಾಗೂ ಕೃಷಿ ಮತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್‌, ಶಿರಸಿ (ಉ. ಕ.) ಇವರುಗಳ ಸಂಯುಕ್ತ ಆಶ್ರಯದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆರ್.ಎನ್. ಹೆಗಡೆ, ಗೋರ್ಸಗದ್ದೆ ಹಾಗೂ ವಿ. ಎನ್. ಭಟ್ಟ ಅಳ್ಳಂಕಿ ಇವರುಗಳಿಗೆ ‘ಅಭಿನಂದನಾ ಸಮಾರಂಭ’ವನ್ನು ನಗರದ ಟಿ.ಆರ್.ಸಿ.ಸಭಾಭವನದಲ್ಲಿ ಜ.31, ಮಂಗಳವಾರದಂದು ಆಯೋಜಿಸಲಾಗಿದೆ.

ಹಾಗೆಯೇ ಶಿರಸಿ ಉಪವಿಭಾಗದ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರು ಹಾಗೂ ರಿಟರ್ನಿಂಗ್ ಆಫೀಸ‌ರ್’ಗಳಿಗೆ ಒಂದು ದಿನದ‌ ಚುನಾವಣಾ ತರಬೇತಿ ಕಾರ್ಯಗಾರವನ್ನೂ ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಟಿ.ಆರ್.ಸಿ. ಅಧ್ಯಕ್ಷ ಹಾಗೂ ಕೃಷಿ, ಕೃಷಿಕ ಹಾಗೂ ಕೃಷಿ ಪತ್ತು ಸಂಘಗಳ ಶ್ರೇಯೋಭಿವೃದ್ಧಿ ಟ್ರಸ್ಟ್, ಶಿರಸಿ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಸಹಕಾರ ರತ್ನ ಪುರಸ್ಕೃತ, ಉತ್ತರ ಕನ್ನಡ ಜಿಲ್ಲಾ ಸಹಕಾರ ಯುನಿಯನ್ ನಿ., ಕುಮಟಾ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಸಹಕಾರ ಯುನಿಯನ್ ಕುಮಟಾ ನಿರ್ದೇಶಕರಾದ ಜಿ.ಟಿ.ಹೆಗಡೆ ತಟ್ಟೀಸರ, ಸಹಕಾರ ರತ್ನ ಪುರಸ್ಕೃತ, ಹಾಸಣಗಿ ಗ್ರೂಪ್ ಗ್ರಾಮಗಳ‌ ಸೇವಾ ಸಹಕಾರಿ‌ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ, ಉತ್ತರ ಕನ್ನಡ ಜಿಲ್ಲಾ ಸಹಕಾರ  ಯೂನಿಯನ್ ಕುಮಟಾ‌ ನಿರ್ದೇಶಕ ಮೋಹನದಾಸ ಜೆ. ನಾಯಕ, ಸಹಕಾರ ಸಂಘಗಳ ಸಹಾಯಕ‌ ನಿಬಂಧಕ ಟಿ.ವಿ.ಶ್ರೀನಿವಾಸ್ ಉಪಸ್ಥಿತರಿರಲಿದ್ದಾರೆ.

300x250 AD

ವಿಶೇಷ ಉಪನ್ಯಾಸಕರಾಗಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ. ಕೆ. ರಾಮಪ್ಪ ಆಗಮಿಸಲಿದ್ದಾರೆ‌.

ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Share This
300x250 AD
300x250 AD
300x250 AD
Back to top