Slide
Slide
Slide
previous arrow
next arrow

ಕಾರಿನ ಬಾಗಿಲು ತಾಗಿ ಬೈಕ್ ಸವಾರನಿಗೆ ಗಾಯ

300x250 AD

ದಾಂಡೇಲಿ: ಕಾರಿನ ಬಾಗಿಲು ತೆಗೆಯುತ್ತಿದ್ದಾಗ ಹಿಂದುಗಡೆಯಿಂದ ಬರುತ್ತಿದ್ದ ಬೈಕ್‌ಗೆ ಬಾಗಿಲು ತಾಗಿ ಸವಾರನ ಕಾಲಿಗೆ ಗಾಯವಾದ ಘಟನೆ ನಗರದ ಜೆ.ಎನ್.ರಸ್ತೆಯಲ್ಲಿ ನಡೆದಿದೆ.
ಕಾರಿನ ಚಾಲಕ ಹಿಂದುಗಡೆ ದ್ವಿಚಕ್ರ ವಾಗಹನ ಬರುತ್ತಿರುವುದನ್ನು ಗಮನಿಸದೇ ಕಾರಿನ ಬಾಗಿಲನ್ನು ತೆರೆದಿದ್ದಾರೆ. ಈ ಸಂದರ್ಭದಲ್ಲಿ ಹಿಂದುಗಡೆಯಿಂದ ಬಂದ ಬೈಕ್‌ಗೆ ಕಾರಿನ ಬಾಗಿಲು ಬಡಿದು ದ್ವಿಚಕ್ರ ವಾಹನವೂ ಸವಾರನ ಸಹಿತ ಕೆಳಗಡೆ ಬಿದ್ದಿದೆ. ಕೆಳಗಡೆ ಬಿದ್ದ ಪರಿಣಮವಾಗಿ ಬೈಕ್ ಸವಾರನ ಕಾಲಿಗೆ ಬಲವಾಗಿ ಗಾಯವಾಗಿದೆ.
ಗಾಯಗೊಂಡ ಬೈಕ್ ಸವಾರ ಯುವಕನಾಗಿದ್ದು, ಸ್ಥಳೀಯ ವಿಜಯನಗರದ ನಿವಾಸಿ ಎನ್ನಲಾಗಿದೆ. ಗಾಯಗೊಂಡ ಸವಾರನನ್ನು ತಕ್ಷಣವೆ ಚಿಕಿತ್ಸೆಗಾಗಿ ಕಾರಿನ ಮಾಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top