Slide
Slide
Slide
previous arrow
next arrow

ಅಂಬೇವಾಡಿಯಲ್ಲಿ ಬಿಜೆಪಿ ಬೂತ್ ವಿಜಯ ಅಭಿಯಾನಕ್ಕೆ ಚಾಲನೆ

300x250 AD

ದಾಂಡೇಲಿ : ವಿಧಾನ ಸಭಾ ಚುನಾವಣೆಗೆ ಮತಗಟ್ಟೆ ಹಂತದಲ್ಲಿ ಪಕ್ಷವನ್ನು ಸಜ್ಜುಗೊಳಿಸುವುದಕ್ಕಾಗಿ ಬಿಜೆಪಿ ಪಕ್ಷವು ಹಮ್ಮಿಕೊಂಡಿರುವ ಬೂತ್ ವಿಜಯ ಅಭಿಯಾನಕ್ಕೆ ದಾಂಡೇಲಿ ನಗರದ ವಾರ್ಡ್ ನಂ:09 ರಲ್ಲಿ ಬರುವ ಅಂಬೇವಾಡಿಯಲ್ಲಿ ಚಾಲನೆಯನ್ನು ನೀಡಲಾಯ್ತು.
ಬಿಜೆಪಿ ತಾಲೂಕು ಘಟಕದ ಅಧ್ಯಕ್ಷರಾದ ಚಂದ್ರಕಾoತ ಕ್ಷೀರಸಾಗರ ಅವರು ವಾರ್ಡ್ ನಂ:09 ರ ಬಿಜೆಪಿ ಬೂತ್ ಅಧ್ಯಕ್ಷರಾದ ಸಂದೀಪ್ ಸಿದ್ದಾನಿಯವರ ಮನೆಗೆ ಬಿಜೆಪಿ ಪಕ್ಷದ ಧ್ವಜವನ್ನು ಕಟ್ಟುವುದರ ಮೂಲಕ ಬೂತ್ ವಿಜಯ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಕಾoತ ಕ್ಷೀರಸಾಗರ್ ಅವರು ಕೇಂದ್ರ ಮತ್ತು ರಾಜ್ಯ ಸರಕಾರ ಜನಪರ ಯೋಜನೆಗಳು ಮತ್ತು ಸರಕಾರದ ಸಾಧನೆಗಳನ್ನು ಮನೆ ಮನೆಗಳಿಗೆ ತಲುಪಿಸುವ ಕರ‍್ಯವನ್ನು ಮಾಡಬೇಕು. ಬೂತ್ ಮಟ್ಟದಿಂದಲೆ ಪಕ್ಷದ ವಿಜಯ ಸಂಕಲ್ಪ ಅಭಿಯಾನವನ್ನು ತೊಟ್ಟು, ಪಕ್ಷದ ಗೆಲುವಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬೂತ್ ಅಧ್ಯಕ್ಷರಾದ ಸಂದೀಪ್ ಸಿದ್ದಾನಿ ಹಾಗೂ ಪಕ್ಷದ ಮುಖಂಡರುಗಳಾದ ಎಂ.ಎಸ್.ನಾಯ್ಕ, ಸಂತೋಷ್ ಸೋಮನಾಚೆ, ಮಿಥುನ್ ನಾಯಕ, ಅನಿಲ್ ದೇಶಪಾಂಡೆ, ಕೃಷ್ಣ ಇಂಗೋಲೆ, ಸುನೀಲ್ ಪಡವಳಕರ್, ಮಲ್ಲಿಕಾರ್ಜುನ್, ಶಗುಣ ನಾಯ್ಕ, ದೀಪಕ್ ಬಾಂದೇಕರ್, ಸುಜಾತಾ ಪಾಟೀಲ್, ಶಾಂತನಗೌಡ ಪಾಟೀಲ್, ಗೋಪಾಲ್ ಶಾ, ಲತಾ ಸಿದ್ದಾನಿ, ಶೈಲೇಶ್ ಕಲ್ಗುಟ್ಕರ್ ಮೊದಲಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top