Slide
Slide
Slide
previous arrow
next arrow

ಯುವಜನತೆಯಲ್ಲಿ ಜೀವನೋತ್ಸಾಹ ಬೆಳೆಸುವ ಕೃತಿಗಳು ಬರಬೇಕು: ರಮೇಶ ಹೆಗಡೆ

300x250 AD

ಶಿರಸಿ: ಈಗಿನ ಯುವಜನತೆಯಲ್ಲಿ ಜೀವನದ ಬಗೆಗೆ ನಿರುತ್ಸಾಹವಿದೆ. ಅಂತಹ ಯುವಕರಲ್ಲಿ ಜೀವನ ಪ್ರೀತಿಯನ್ನು ಬೆಳೆಸುವಂತೆ ಕೃತಿ ಇರಬೇಕು. ಆ ಕಾರ್ಯವನ್ನು ‘ಮನಿ ಟ್ರ‍್ಯಾಪ್’ ಮಾಡಿದೆ ಎಂದು ರಮೇಶ ಹೆಗಡೆ ಕೆರೆಕೋಣ ಹೇಳಿದರು.
ಮಹೇಶ್ ಕುಮಾರ ಹೆನಕರೆಯವರು ರಚಿಸಿದ ‘ಮನಿ ಟ್ರ‍್ಯಾಪ್’ ಎನ್ನುವ ಕಥಾಸಂಕಲನವನ್ನು ಪರಿಚಯಿಸಿ ಮಾತನಾಡಿ, 41 ಕಥೆಗಳನ್ನು ಹೊಂದಿರುವ ಈ ಕೃತಿಯು ಸಹಜತೆ, ವಾಸ್ತವದ ಪ್ರತಿಬಿಂಬವಾಗಿ ಜೀವನದ ವಿವಿಧ ಅನುಭವಗಳನ್ನ ಈ ಕಥೆಗಳು ಕಟ್ಟಿವೆ. ಅನಿರೀಕ್ಷಿತ ತಿರುವು, ಮೋಸದ ಹಗಲು ದರೋಡೆ ಇಂತಹ ಕುತೂಹಲಭರಿತವಾದ ವಿಷಯಗಳನ್ನು ಈ ಕಥೆಗಳು ಇರಿಸಿಕೊಂಡಿವೆ. ಸುಂದರ ಚಿತ್ರಕ್ಕೆ ಸುವರ್ಣದ ಚೌಕಟ್ಟನ್ನು ಹೊಂದಿರುವ ಕೃತಿ ಇದಾಗಿದೆ. ವಾಸ್ತವದ ಹತ್ತಿರದಲ್ಲಿ ಕಥೆ ಕಟ್ಟುವ ಕಲೆ ಮಹೇಶ್ ಕುಮಾರ ಹನಕೆರೆಯವರಿಗೆ ಸಿದ್ಧಿಸಿದೆ. ಲೇಖಕರ ಬಗೆಗಿನ ಅಪಪ್ರಚಾರಕ್ಕೆ ಕಿವಿಗೊಟ್ಟು ಬರೆಯುವ ಧೃತಿಯನ್ನು ಕಳೆದಿಕೊಳ್ಳಬೇಡಿ ಎನ್ನುವ ಕಿವಿ ಮಾತನ್ನು ಲೇಖಕರಿಗೆ ಹೇಳಿದರು.
ಮನಿ ಟ್ರ‍್ಯಾಪ್ ಕಥಾ ಸಂಕಲನವು ಜೀವನದ ಒಳಹೊಕ್ಕು ಮತಿಸಿದ ಕಥಾಗುಚ್ಚವಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ಗಣಪತಿ ಭಟ್ ವರ್ಗಾಸರ ಹೇಳಿದರು. ಕೃತಿಕಾರರಾದ ಮಹೇಶ್‌ಕುಮಾರ ಹನಕೆರೆಯವರು ಶಿರಸಿಯ ಜನತೆಯ ಬಗೆಗಿರುವ ಅಭಿಮಾನವನ್ನು ಹಂಚಿಕೊಳ್ಳುತ್ತಾ. ಸ್ನೇಹಿತ ಕೃಷ್ಣ ಪದಕಿಯವರ ಸ್ನೇಹವನ್ನು ಅಭಿನಂದಿಸಿ ಗುರುಗಳಂತಿರುವ ಗಣಪತಿ ಭಟ್ಟ ವರ್ಗಾಸರ ಅವರ ಅಭಿಮಾನವನ್ನು ಸ್ಮರಿಸಿಕೊಂಡರು. ತಮ್ಮ  ಬರಹಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಇದೇ ಕಾರ್ಯಕ್ರಮದಲ್ಲಿ ಅನಂತ ತಾಮ್ಹನಕರ್ ಅವರು ಬರೆದ ‘ಹೊತ್ತು ಕಳೆಯಲು ಬರೆದ ಹತ್ತು ಸಾಲುಗಳು’ ಎನ್ನುವ ಕವನ ಸಂಕಲನದ ಕೃತಿ ಪರಿಚಯವನ್ನು ಕವಯತ್ರಿ ರೋಹಿಣಿ ಹೆಗಡೆಯವರು ಮಾಡಿದರು. ಓದುತ್ತಲೇ ತಾಳ ಹಾಕುವಷ್ಟು ಲಯ, ಛಂದ ಹಾಗೂ ಪ್ರಾಸಬದ್ಧ ವಾದ ಕವನಗಳು ಇಲ್ಲಿವೆ. ಇರುವ ಎಲ್ಲ ಕವನಗಳೂ ಸರಳ ವಸ್ತುವನ್ನು ಹೊಂದಿದ್ದು, ಸುಂದರವಾದ ಸಹಜತೆಯ ಸೌಂದರ್ಯ ಕವನಕ್ಕಿದೆ. ಮೂಲ ಮರಾಠಿಯವರಾದರೂ ಕನ್ನಡವನ್ನು ಕಲಿತು ಚೆಂದನೆಯ ಕಾವ್ಯ ರಚಿಸುವ ಕವಿಯ ಗುಣವನ್ನು ಹೊಗಳಿ ತಾಮ್ಹನಕರ್ ಅವರು ಬರೆದ ಕವನವನ್ನು ಹಾಡಿದರು. ಕವನ ಸಂಕಲನದ ಲೇಖಕರಾದ ಅನಂತ ತಾಮ್ಹನಕರ್ ಅವರು ತಮ್ಮ ಕನ್ನಡ ಸಾಹಿತ್ಯದ ಹಾದಿಯನ್ನು ಸ್ಮರಿಸಿಕೊಂಡರು.
ಡಾ.ಶೈಲಜಾ ಮಂಗ್ಳೂರು ಪ್ರಾರ್ಥಿಸಿದರೆ, ಸುಜಾತ ಹೆಗಡೆ ಸ್ವಾಗತಿಸಿದರು. ಯಶಸ್ವಿನಿ ಶ್ರೀಧರ ಮೂರ್ತಿ ನಿರೂಪಿಸಿದರು. ಅನಂತ ಹೆಗಡೆ ಬಾಳೆಗದ್ದೆ, ಜಯಪ್ರಕಾಶ್ ಹಬ್ಬು, ಶೋಭಾ ಭಟ್ಟ, ಭವ್ಯಾ ಹಳೆಯೂರು, ಕೆ.ಎಸ್.ಅಗ್ನಿಹೋತ್ರಿ, ಜಗದೀಶ ಭಂಡಾರಿ, ಉಮೇಶ ದೈವಜ್ಞ, ಡಿ.ಎಂ.ಭಟ್ಟ ಕುಳುವೆ, ಸುಜಾತಾ ಹೆಗಡೆ, ಪರಮ್ ಕಾಳೇಬೈಲ್, ದಾಕ್ಷಾಯಣಿ ಪಿ.ಸಿ, ಅಜಿತ್ ಬಿಳಗಿ, ಮಂಗಳಗೌರಿ ಭಟ್ಟ, ಜಲಜಾಕ್ಷಿ ಶೆಟ್ಟಿ, ನವೀನ್‌ಕುಮಾರ್ ಎ.ಜೆ., ಸುಧಾ ಆಚಾರ್ಯ, ವೀಣಾ ನಾಯ್ಕ, ಜಿ.ವಿ.ಭಟ್ಟ ಕೊಪ್ಪಲುತೋಟ, ದಿನೇಶ ಅಮ್ಮಿನಳ್ಳಿ, ರಾಜೇಶ್ವರಿ ಹೆಗಡೆ, ರಮೇಶ ಹೆಗಡೆ, ಯಶಸ್ವಿನಿ ಕವಿಗೋಷ್ಠಿಯಲ್ಲಿ ಈ ಎಲ್ಲಾ ಕವಿಗಳು ಭಾಗವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top