Slide
Slide
Slide
previous arrow
next arrow

ವಿವಿಧ ಸ್ಪರ್ಧೆಗಳಲ್ಲಿ ವಾನಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಾಧನೆ

300x250 AD

ಶಿರಸಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಇಸಳೂರಿನಲ್ಲಿ ನಡೆದ ಇತ್ತೀಚೆಗೆ ಶಿರಸಿ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಾನಳ್ಳಿಯ ಶ್ರೀ ಗಜಾನನ ಮಾಧ್ಯಮಿಕ ಶಾಲೆಯಲ್ಲಿ ಸ್ವಾತಿ ಗಣಪತಿ ಭಟ್ ಕನ್ನಡ ಭಾಷಣದಲ್ಲಿ ಪ್ರಥಮ, ಪೂರ್ಣ ದತ್ತಾತ್ರೇಯ ವೈದ್ಯ ರಂಗೋಲಿಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸುಮುಖ ಮಹಾಬಲೇಶ್ವರ ಹೆಗಡೆ ಸಿದ್ದ ಭಾಷಣದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.

ಹಾಗೆಯೇ ನ.16ರಂದು ನಡೆದ ಮತದಾರ ಸಾಕ್ಷರತಾ ಸಂಘದ ತಾಲೂಕಾ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಶಾಂತ ಕೃಷ್ಣಮೂರ್ತಿ ಹೆಗಡೆ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ, ಎಸ್.ಡಿ.ಎಂಸಿ. ಶಿಕ್ಷಕವೃಂದ ಮತ್ತು ಪಾಲಕರು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top