Slide
Slide
Slide
previous arrow
next arrow

ದೇವನಳ್ಳಿಯಲ್ಲಿ ನ.17ಕ್ಕೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ

300x250 AD

ಶಿರಸಿ: ತಾಲೂಕಿನ ಮುಂಡಗನಮನೆಯ ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ‌ 69ನೇ ಸಹಕಾರಿ ಸಪ್ತಾಹದ ಅಂಗವಾಗಿ ಶ್ರೀಪಾದ ಹೆಗಡೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಶಿರಸಿಯ ಸಹಯೋಗದೊಂದಿಗೆ ಹೆಚ್.ಸಿ.ಜಿ. ಎನ್.ಎಮ್.ಆರ್. ಕ್ಯೂರ್ ಸೆಂಟರ್ ಆಫ್ ಅಂಕಾಲಜಿಯವರ ನುರಿತ ವೈದ್ಯರುಗಳಿಂದ ಉಚಿತ ಕ್ಯಾನ್ಸರ್ ತಪಾಸಣಾ ಹಾಗೂ ರಕ್ತದಾನ ಮತ್ತು ವರ್ಗೀಕರಣ ಶಿಬಿರವನ್ನು‌ ಮುಂಡಗನಮನೆ‌ ಸೊಸೈಟಿಯ ದೇವನಳ್ಳಿ ಶಾಖೆಯ ಆವಾರದಲ್ಲಿ ನ.17,ಗುರುವಾರದಂದು ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು  ಶ್ರೀಪಾದ್ ಹೆಗಡೆ ಕಡವೆ ವೈದ್ಯಕೀಯ ಸಂಸ್ಥೆಯ ಕಾರ್ಯಾಧ್ಯಕ್ಷ ಆರ್. ಎಸ್. ಹೆಗಡೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮುಂಡಗನಮನೆ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಸಹಕಾರಿ ಸಂಘಗಳ ಉಪನಿಬಂಧಕ ಆರ್. ಮಂಜುನಾಥ ಟಿಎಸ್ಎಸ್ ಆಸ್ಪತ್ರೆ ನಿರ್ದೇಶಕ ಸುಬ್ರಮಣ್ಯ ವಿಶ್ವಾಮಿತ್ರ ಓಣಿಗದ್ದೆ, ಪ್ಯಾರಾ ಮೆಡಿಕಲ್ ಕಾಲೇಜ್ ಪ್ರಿನ್ಸಿಪಾಲ್ ಪಿ.ಎಸ್ ಹೆಗಡೆ ಆಗಮಿಸಲಿದ್ದಾರೆ. ಸಾರ್ವಜನಿಕರು ಶಿಬಿರದ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top