• Slide
    Slide
    Slide
    previous arrow
    next arrow
  • ಸಿದ್ಧಿವಿನಾಯಕ ದೇವಸ್ಥಾನಕ್ಕೆ ಧನಸಹಾಯ ಮಂಜೂರಿ

    300x250 AD

    ಭಟ್ಕಳ: ಹೆಬಳೆಯ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಎರಡೂವರೆ ಲಕ್ಷ ಧನಸಹಾಯವನ್ನು ಮಂಜೂರಿ ಮಾಡಿದ್ದಾರೆ. ಇದರ ಡಿ.ಡಿ.ಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಗಣೇಶ ನಾಯ್ಕ ಆಡಳಿತ ಮಂಡಳಿಗೆ ಹಸ್ತಾಂತರಿಸಿದರು.
    ಈ ಸಂದರ್ಭದಲ್ಲಿ ಹೆಬಳೆ ವಲಯದ ಮೇಲ್ವಿಚಾರಕಿ, ಸೇವಾಪ್ರತಿನಿಧಿ ನಾಗರತ್ನ, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಧರ ನಾಯ್ಕ, ಸದಸ್ಯರುಗಳಾದ ಎಂ.ಡಿ.ನಾಯ್ಕ, ಶ್ರೀಧರ ನಾಯ್ಕ, ಗಣೇಶ ದೇವಡಿಗ, ಪಂಚಾಯತ್ ಸದಸ್ಯ ರಾಮ ಹೆಬಳೆ, ಊರಿನ ಗಣ್ಯರುಗಳಾದ ಮಂಜುನಾಥ ನಾಯ್ಕ, ಸುಬ್ರಾಯ ದೇವಡಿಗ ಹಾಗೂ ಕುಪ್ಪ ನಾಯ್ಕ ಹಾಜರಿದ್ದರು. ಆಡಳಿತ ಮಂಡಳಿಯಿ0ದ ವೀರೇಂದ್ರ ಹೆಗ್ಗಡೆಯರಿಗೆ ಧನ್ಯವಾದಗಳನ್ನು ಕೂಡ ಸಲ್ಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top