• Slide
    Slide
    Slide
    previous arrow
    next arrow
  • ಲಯನ್ಸ್ ಶಾಲೆಯ ಸಭಾಂಗಣದಲ್ಲಿ ಮೊಳಗಿದ ಕನ್ನಡ ಡಿಂಡಿಮ

    300x250 AD

    ಶಿರಸಿ: ನಗರದ ಲಯನ್ಸ್ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಶಿರಸಿ ಲಯನ್ಸ ಕ್ಲಬ್, ಲಿಯೋಕ್ಲಬ್ ಶಿರಸಿ, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿಗಳ ಸಹಯೋಗದಲ್ಲಿ ಸರಳವಾಗಿ ಹಾಗೂ ಅಷ್ಟೇ ವಿಭಿನ್ನವಾಗಿ ನ.1 ರಂದು ಆಚರಿಸಲಾಯಿತು. ನಾಡದೇವಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮವು ಆರಂಭಗೊಂಡಿತು.
    ವಿದ್ಯಾರ್ಥಿಗಳಿಗೆ ಕನ್ನಡದ ನಾಡು ನುಡಿಯ ಬಗ್ಗೆ ತಿಳುವಳಿಕೆ ಮೂಡಿಸಲು ಶಿಕ್ಷಕ ವೃಂದವು, ಮುಖ್ಯೋಪಾಧ್ಯಾಯರ ಮಾರ್ಗದರ್ಶನದಲ್ಲಿ “ಕನ್ನಡಮ್ಮನ ಕರೆ” ಎನ್ನುವಂತಹ ರಸಪ್ರಶ್ನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಾಗವಹಿಸಿದ ತಂಡಗಳು ಮತ್ತು ಉಳಿದ ವಿದ್ಯಾರ್ಥಿಗಳು ಕೂಡ ತುಂಬಾ ಉತ್ಸುಕತೆಯಲ್ಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
    ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಲ. ಪ್ರೊ.ಎನ್.ವಿ.ಜಿ ಭಟ್ ಶುಭಾಶಯ ಕೋರಿದರು. ಉಪಾಧ್ಯಕ್ಷರಾದ ಲ, ಪ್ರಭಾಕರ ಹೆಗಡೆ, ಹಾಗೂ ಶಿರಸಿ ಲಯನ್ಸ್ ಕ್ಲಬ್ ಪ್ರಸ್ತುತ ಅಧ್ಯಕ್ಷರಾದ ಎಂ.ಜೆ.ಎಫ್.ಲ. ತ್ರಿವಿಕ್ರಮ್ ಪಟವರ್ಧನ್, ಕಾರ್ಯದರ್ಶಿಗಳಾದ ಎಂ.ಜೆ.ಎಫ್. ಲ. ರಮಾ ಪಟವರ್ಧನ್, ಕೋಶಾಧ್ಯಕ್ಷರಾದ ಲಯನ್ ರಾಜಲಕ್ಷ್ಮಿ ಹೆಗಡೆ, ಲಿಯೋಕ್ಲಬ್ ಮಾರ್ಗದರ್ಶಕರಾದ ಲಯನ್ ಅಶ್ವತ್ಥ ಹೆಗಡೆ, ಲಯನ್ ಸುಮಂಗಲಾ ಹೆಗಡೆ, ಲಯನ್ ಬಾಬುಲಾಲ್ ಚೌಧರಿ ಹಾಗೂ ಲಯನ್ಸ್ ಇನ್ನಿತರ ಸದಸ್ಯರುಗಳು, ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಶಾಲೆಯ ಮುಖ್ಯಾಧ್ಯಾಪಕರಾದ ಶಶಾಂಕ ಹೆಗಡೆಯವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಾಲೆಯ ಸಂಗೀತ ಶಿಕ್ಷಕಿ ಶ್ರೀಮತಿ ದೀಪಾ ಶಶಾಂಕ ಹೆಗಡೆಯವರ ನೇತೃತ್ವದಲ್ಲಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರು ನಾಡಗೀತೆ ಮತ್ತು ಕನ್ನಡಾಭಿಮಾನದ ಗೀತೆಗಳನ್ನು ಹಾಡುವುದರೊಂದಿಗೆ, ಶಾಲೆಯ ಸಹ ಸಿಬ್ಬಂದಿ ನವೀನ್ ಅಂಕೋಲೆಕರ್ ರವರು ಹುಟ್ಟಿದರೆ ಕನ್ನಡ ನಾಡು ಹಾಡನ್ನು ಹಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹ ತುಂಬಿದರು. ಸಹ ಶಿಕ್ಷಕಿ ಶ್ರೀಮತಿ ಸೀತಾ ವಿ.ಭಟ್ ಇವರು ವಂದನಾರ್ಪಣೆ ಸಲ್ಲಿಸಿದರು.ಕಾರ್ಯಕ್ರಮವನ್ನು ಸಹ ಶಿಕ್ಷಕಿ ಶ್ರೀಮತಿ ಚೇತನಾ ಹೆಗಡೆ ನಿರ್ವಹಿಸಿದರು.
    ಬೆಳಿಗ್ಗೆ ಮಾರಿಕಾಂಬಾ ವಿದ್ಯಾಲಯದಿಂದ ಆರಂಭವಾದ ಮೆರವಣಿಗೆಯಲ್ಲಿ ತಾಯಿ ಭುವನೇಶ್ವರಿ ಮೂರ್ತಿಯೊಂದಿಗೆ ಲಯನ್ಸ ಶಾಲಾ ಸ್ಕೌಟ್ ಹಾಗೂ ಗೈಡ್ ವಿದ್ಯಾರ್ಥಿಗಳು ಮಾರ್ಗದರ್ಶಕರಾದ ರಾಘವೇಂದ್ರ ಹೊಸೂರು, ಶ್ರೀಮತಿ ಚೇತನಾ ಪಾವಸ್ಕರ ನೇತೃತ್ವದಲ್ಲಿ ಹೆಜ್ಜೆ ಹಾಕಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top