Slide
Slide
Slide
previous arrow
next arrow

ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ ಸಂಘದ ಗಲಾಟೆ , ರಾಜಿ ಮಾಡಿಸಿದ ಸಿಮಾನಿ

300x250 AD

ಮುಂಡಗೋಡ: ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ ಸಂಘ ಇಬ್ಭಾಗಗೊಂಡು, ಕ್ಷುಲ್ಲಕ ವಿಚಾರಕ್ಕೆ ಎದ್ದಿದ್ದ ಗಲಾಟೆಯನ್ನ ಪಿಐ ಎಸ್.ಎಸ್.ಸಿಮಾನಿ ತಣ್ಣಗಾಗಿಸಿದ್ದಾರೆ.
ಟಿಬೇಟ್ ಕ್ಯಾಂಪ್‌ನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ ಚಾಲಕ ಹಾಗೂ ಮಾಲಕರ ಸಂಘ ಇಬ್ಭಾಗವಾಗಿದ್ದು, ಇಬ್ಬರ ಮಧ್ಯೆ ಟ್ಯಾಕ್ಸಿ ಬೇರೆ ಬೇರೆ ರೂಟ್‌ಗೆ ತೆಗೆದುಕೊಂಡು ಹೋಗುವ ವಿಚಾರದಲ್ಲಿ ಗಲಾಟೆ ನಡೆಯುತ್ತಿತ್ತು. ಪಿಐ ಸಿಮಾನಿಯವರು ಗುರುವಾರ ಎರಡೂ ಸಂಘದವರಿಗೆ ಠಾಣೆಗೆ ಕರೆದು, ಎರಡು ಸಂಘದ ಸದಸ್ಯರ ವಿಚಾರಗಳನ್ನು ತಿಳಿದುಕೊಂಡರು.
ನಂತರ ಮಾತನಾಡಿದ ಅವರು, ಎಲ್ಲರೂ ಒಟ್ಟಾಗಿ ನಡೆದುಕೊಂಡು ಹೋಗಿ. ನಿಮ್ಮ ನಿಮ್ಮೊಳಗೆ ಜಗಳ ಬೇಡ. ಯಾವ ಟ್ಯಾಕ್ಸಿ ಬೇಕಾದರೂ ಯಾವ ರೂಟ್‌ಗೆ ಬೇಕಾದರೂ ಹೋಗಲಿ. ಎಲ್ಲರೂ ಸಹೋದರತೆಯಿಂದ ನಡೆದುಕೊಳ್ಳಿ ಎಂದು ಬುದ್ಧಿಮಾತು ಹೇಳಿ ಕಳುಹಿಸಿದ್ದಾರೆ. ಆ ಮೂಲಕ ಗಲಾಟೆ ಸದ್ಯ ತಣ್ಣಗಾಗಿದೆ.

300x250 AD
Share This
300x250 AD
300x250 AD
300x250 AD
Back to top