Slide
Slide
Slide
previous arrow
next arrow

ಎನ್.ಎಸ್.ಎಸ್.ನಲ್ಲಿ ಕಮಲಾ ನೆಹರು ವಿದ್ಯಾರ್ಥಿನಿಯರ ಸಾಧನೆ

300x250 AD

ಶಿವಮೊಗ್ಗ: ಎನ್.ಎಸ್.ಎಸ್.ಸಂಸ್ಥಾಪನಾ ದಿನದ ಅಂಗವಾಗಿ ಕೃಷಾ ಫೌಂಡೇಷನ್ ಎನ್.ಎಸ್.ಎಸ್.ಸ್ವಯಂಸೇವಕ/ಸೇವಕಿಯರಿಗೆ  ಕೊಡಮಾಡುವ ರಾಷ್ಟ್ರೀಯ ಎನ್.ಎಸ್.ಎಸ್.ಯುವ ಯೋಧ ಪ್ರಶಸ್ತಿಗೆ   ಶಿವಮೊಗ್ಗದ   ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಬಿ.ಎ.ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಕು.ನಾಗವೇಣಿ ಎನ್. ಮತ್ತು ಸತ್ಯವತಿ ಬಿ. ಅವರು ಭಾಜನರಾಗಿದ್ದಾರೆ. ಈ ಸ್ವಯಂಸೇವಕಿಯರು ಸಾಮಾಜಿಕ ಸೇವಾ ಸಂಸ್ಥೆಗಳಾದ ಪರೋಪಕಾರಂ, ಚೆನ್ನುಡಿ ಬಳಗ, ಪರ್ಯಾವರಣ ಸಂರಕ್ಷಣಾ ಟ್ರಸ್ಟ್,  ಸಿಹಿಮೊಗೆ ಕ್ರಿಕೆಟ್ ಅಕಾಡೆಮಿ, ಓನ್ಲಿ ಒನ್ ಅಥ್೯ ಮತ್ತಿತರ ಸಂಘಟನೆಗಳ ಜತೆ ಸಕ್ರಿಯವಾಗಿ ಭಾಗವಹಿಸಿ ಅನೇಕ  ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು  ತಾವು ತೊಡಗಿಸಿಕೊಂಡಿದ್ದಾರೆ. ಎನ್.ಎಸ್.ಎಸ್.ಸಂಸ್ಥಾಪನಾ ದಿನವಾದ ಸೆಪ್ಟೆಂಬರ್ 24ರಂದು ವರ್ಚುವಲ್ ಪ್ರೊಗ್ರಾಮ್ ಮೂಲಕ ವಿಜೇತರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.  ಪ್ರಶಸ್ತಿ ವಿಜೇತರನ್ನು ಪ್ರಾಚಾರ್ಯರಾದ ಡಾ.ಎಚ್.ಎಸ್.ನಾಗಭೂಷಣ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಡಾ.ಬಾಲಕೃಷ್ಣ ಹೆಗಡೆ, ಶ್ರೀಮತಿ ದೀಪಿಕಾ ವಿ., ಎನ್.ಇ.ಎಸ್.ಆಡಳಿತ ಮಂಡಳಿಯವರು ವಿಜೇತರನ್ನು ಅಭಿನಂದಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top