• Slide
    Slide
    Slide
    previous arrow
    next arrow
  • ಸೆ.13 ಕ್ಕೆ ‘ಸೇವಾಭಿನಂದನ’ ಸಮಾರಂಭ; ಸಹಕಾರಿ ಎನ್.ಬಿ.ಹೆಗಡೆ ಮತ್ತಿಹಳ್ಳಿಗೆ ಸನ್ಮಾನ

    300x250 AD

    ಸಿದ್ದಾಪುರ: ಜಿಲ್ಲೆಯ ಹಿರಿಯ ಸಾಧಕ ಸಹಕಾರಿ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಾಣಿಕಟ್ಟಾ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಎನ.ಬಿ.ಹೆಗಡೆ ಮತ್ತಿಹಳ್ಳಿ ಇವರನ್ನು ಸನ್ಮಾನಿಸುವ ‘ಸೇವಾಭಿನಂದನ’ ಕಾರ್ಯಕ್ರಮವು ಸೆ.13, ಮಂಗಳವಾರ ತ್ಯಾಗಲಿ-ನಾಣಿಕಟ್ಟಾ ಸೇವಾ ಸಹಕಾರಿ ಸಂಘದ ಆವಾರದಲ್ಲಿ ಮ.3.30 ರಿಂದ ನಡೆಯಲಿದೆ.

    ಎನ.ಬಿ.ಹೆಗಡೆ ಮತ್ತಿಹಳ್ಳಿ ಸನ್ಮಾನ ಸಮಿತಿ ನಾಣಿಕಟ್ಟಾ ಆಯೋಜಿಸಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸನ್ಮಾನ ಸಮಿತಿ ಅಧ್ಯಕ್ಷ ಎ.ಪಿ.ಭಟ್ಟ ಮುತ್ತಿಗೆ ವಹಿಸಲಿದ್ದು, ಅಭ್ಯಾಗತರಾಗಿ ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕದಂಬ ಮಾರ್ಕೇಟಿಂಗ್ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡು, ಹಿರಿಯ ಸಹಕಾರಿ ಎಸ್.ಪಿ.ಶೆಟ್ಟಿ, ಸನ್ಮಾನ ಸಮಿತಿ ಕಾರ್ಯಾಧ್ಯಕ್ಷ ಎಂ.ಆರ್.ಹೆಗಡೆ ಬಾಳೆಜಡ್ಡಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top