• Slide
    Slide
    Slide
    previous arrow
    next arrow
  • ದಾಂಡೇಲಿ- ಸಿದ್ದಾಪುರ- ಬೆಂಗಳೂರು ಬಸ್ ಪುನರಾರಂಭಿಸಲು ಮನವಿ

    300x250 AD

    ಸಿದ್ದಾಪುರ: ರದ್ದಾಗಿರುವ ದಾಂಡೇಲಿ- ಸಿದ್ದಾಪುರ- ಬೆಂಗಳೂರು ರಾತ್ರಿ ಬಸ್ಸನ್ನು ಪುನಃ ಆರಂಭಿಸುವಂತೆ ಸ್ಥಳೀಯ ನಾಗರಿಕರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮನವಿ ಮಾಡಿ ಆಗ್ರಹಿಸಿದ್ದಾರೆ.

    ಅನೇಕ ವರ್ಷಗಳಿಂದ ಇದ್ದ ದಾಂಡೇಲಿ- ಸಿದ್ದಾಪುರ- ಬೆಂಗಳೂರು ಬಸ್ಸು ರದ್ದುಗೊಂಡಿದೆ. ಸಿದ್ದಾಪುರ- ಸಾಗರದ ಪ್ರಯಾಣಿಕರಿಗೆ ಶಿರಸಿಯಿಂದ ರಾತ್ರಿ 9.30ಕ್ಕೆ ಬಿಡುವ ಕೊನೆಯ ಬಸ್ಸು ಇದಾಗಿತ್ತು. ಮುಂಜಾನೆ 3.45ಕ್ಕೆ ಸಾಗರದಿಂದ ಮತ್ತು 4.30ಕ್ಕೆ ಸಿದ್ದಾಪುರದಿಂದ ಶಿರಸಿಗೆ ಹೋಗುವ ಪ್ರಥಮ ಬಸ್ ಇದಾಗಿದ್ದು, ಈ ಬಸ್ ರದ್ದಾಗಿರುವುದರಿಂದ ಪ್ರಯಾಣಿಕರಿಗೆ ತುಂಬಾ ಅನಾನುಕೂಲವಾಗುತ್ತಿದೆ ಎಂದು ಗಮನಕ್ಕೆ ತಂದಿದ್ದಾರೆ.

    300x250 AD

    ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಮರನಾಥ ವಿ.ಭಟ್ಟಿ, ಪ್ರಶಾಂತ ಎಚ್.ಶೇಟ್, ಸಮೀರ್ ಮುನಾವರ ಸಾಬ್ ಮೊದಲಾದವರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top