Slide
Slide
Slide
previous arrow
next arrow

ಸೆ.3 ರಂದು ವಿದ್ಯುತ್ ಅದಾಲತ್, ಗ್ರಾಹಕರ ಸಂವಾದ ಸಭೆ

300x250 AD

ಶಿರಸಿ: ಮಾನ್ಯ ಕರ್ನಾಟಕ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗದ ನಿರ್ದೇಶನದಂತೆ ಪ್ರತಿ ತಿಂಗಳ 3 ನೇ ಶನಿವಾರದಂದು ನಡೆಯುವ “ವಿದ್ಯುತ್ ಅದಾಲತ್” ಹಾಗೂ “ಗ್ರಾಹಕರ ಸಂವಾದ” ಸಭೆಯನ್ನು ಪ್ರತಿ ತಿಂಗಳ 1 ನೇ ಶನಿವಾರದಂದು ಹೆಸ್ಕಾಂ ಕಛೇರಿಯಲ್ಲಿ ನಡೆಸಲಾಗುವುದು. ಅದರಂತೆ ಸೆ.3 ರಂದು ವಿದ್ಯುತ್ ಅದಾಲತ್‌ನ್ನು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ಗಂಟೆಯವರೆಗೆ ಹಾಗೂ ಗ್ರಾಹಕರ ಸಂವಾದ ಸಭೆಯನ್ನು ಮಧ್ಯಾಹ್ನ 3.00 ರಿಂದ 05.30 ರವರೆಗೆ ನಡೆಸಲಾಗುವುದು.

ಕಾರಣ ಸಾರ್ವಜನಿಕರು ವಿದ್ಯುತ್ ಅದಾಲತ್‌ನಲ್ಲಿ ತಮ್ಮ ಅಹವಾಲು ಸಲ್ಲಿಸಲು ಹಾಗೂ ಗ್ರಾಹಕರ ಸಂವಾದ ಸಭೆಯಲ್ಲಿ ತಮ್ಮ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸಲು ಸಭೆಗೆ ಹಾಜರಾಗಲು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top