Slide
Slide
Slide
previous arrow
next arrow

ಜನರಿಂದ ಆಯ್ಕೆಯಾದ ಸದಸ್ಯರ ಸದಸ್ಯತ್ವ ತೆಗೆಯುವುದು ಪ್ರಜಾಪ್ರಭುತ್ವ ವಿರೋಧಿ ನಿಯಮ

300x250 AD

ಯಲ್ಲಾಪುರ: ಸರ್ಕಾರವು ಪ್ರಕಟಿಸಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ,ಹಾಗೂ ಸದಸ್ಯರನ್ನ ತೆಗೆದು ಹಾಕುವ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ ನಿಯಮವಾಗಿದೆ ಎಂದು ಗ್ರಾ.ಪಂ.ಜನಪ್ರತಿನಿಧಿಗಳ ತಾಲೂಕಾ ಒಕ್ಕೂಟ ಖಂಡಿಸಿದೆ.

 ಈ ಕುರಿತು ಒಕ್ಕೂಟದ ಅಧ್ಯಕ್ಷ ಎಂ.ಕೆ.ಭಟ್ಟ ಯಡಳ್ಳಿ  ಒಕ್ಕೂಟದ ಪರವಾಗಿ ಗುರುವಾರ ಎಂಎಲ್ಸಿ ಗಣಪತಿ ಉಳ್ವೇಕರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರದ ಈ ನಿಯಮದಿಂದಾಗಿ ,ಪಿಡಿಒ ಹೊರತು ಪಡಿಸಿ ಮೇಲಿನ ಎಲ್ಲಾ ಅಧಿಕಾರಿಗಳು ಗ್ರಾಮ ಪಂಚಾಯತ್ ಅಧ್ಯಕ್ಷ ,ಉಪಾಧ್ಯಕ್ಷ ,ಹಾಗೂ ಸದಸ್ಯರ ಮೇಲೆ ದೂರು ದಾಖಲಿಸಿ ತನಿಖೆ ಮಾಡುವ ಅಧಿಕಾರ ಪಡೆಯುತ್ತಾರೆ.  ಜನರಿಂದ ಆಯ್ಕೆಯಾದ ಸದಸ್ಯರ ಸದಸ್ಯತ್ವವನ್ನು  ಕಿತ್ತುಕೊಳ್ಳುವ, ಅಧಿಕಾರವನ್ನು ಈ ನಿಯಮ ಅಧಿಕಾರಿಗಳಿಗೆ  ನೀಡಿದೆ. ಆದ್ದರಿಂದ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಸರ್ಕಾರದ ವಿರೋಧಿ ನಿಯಮವನ್ನು ಒಕ್ಕೂಟ ವಿರೋಧಿಸುತ್ತದೆ.

300x250 AD

   ಇದನ್ನು ಸರ್ಕಾರ ಹಿಂಪಡೆಯದಿದ್ದರೆ , ರಾಜ್ಯ ಒಕ್ಕೂಟದ ಅಡಿಯಲ್ಲಿ  ರಾಜ್ಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Share This
300x250 AD
300x250 AD
300x250 AD
Back to top