Slide
Slide
Slide
previous arrow
next arrow

ಹಿಂದುಳಿದ ಸಮಾಜದ ಅಕಾಡೆಮಿಯ ಸದಸ್ಯತ್ವ ಕಡಿಮೆ ಮಾಡಿದ್ದು ಖಂಡನೀಯ: ಪ್ರೇಮಾನಂದ ನಾಯ್ಕ

300x250 AD

ಯಲ್ಲಾಪುರ: ಕೊಂಕಣಿ ಅಕಾಡೆಮಿ ಸದಸ್ಯರಾದ ಚಿದಾನಂದ ದೇಶಭಂಡಾರಿ ಕುಮಟಾ ಹಾಗೂ ನಾರಾಯಣ ಖಾರ್ವಿ ಕುಂದಾಪುರ ಇವರನ್ನು ಏಕಾಏಕಿ ಕೈಬಿಟ್ಟಿರುವ ಸರ್ಕಾರದ ನಿರ್ಧಾರವನ್ನು ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಪ್ರೇಮಾನಂದ ನಾಯ್ಕ ಖಂಡಿಸಿದ್ದಾರೆ.

 ಅವರು ಈ ಕುರಿತು ಪತ್ರಿಕಾ ಹೇಳಿಕೆ ನೀಡಿ, ಹಿಂದುಳಿದ ಸಮಾಜವನ್ನು ಕೇವಲ ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡು ಅವರ ಅಕಾಡೆಮಿಯ ಸದಸ್ಯತ್ವವನ್ನು ಒಮ್ಮೆಲೆ ಕಡಿಮೆ ಮಾಡಿರುವುದು ಸರಿಯಾದ ಕ್ರಮ ಅಲ್ಲ. ಚಿದಾನಂದ ದೇಶಭಂಡಾರಿ ಅವರು ಆರ್.ಎಸ್.ಎಸ್, ಹಿಂದು ಸಂಘಟನೆ ಹಾಗೂ ಆಡಳಿತ ಪಕ್ಷದಲ್ಲಿ ಸಕ್ರಿಯವಾಗಿದ್ದಾರೆ. ಭಂಡಾರಿ ಸಮಾಜದ ಹಿರಿಯ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಇವರನ್ನು ಮತ್ತೆ ಸದಸ್ಯರಾಗಿ ಮುಂದುವರಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top