Slide
Slide
Slide
previous arrow
next arrow

ರಾಜೀವ ಗಾಂಧಿ ವಸತಿ ಯೋಜನೆಯಲ್ಲಿ ಅವ್ಯವಹಾರ: ಬಿಜೆಪಿಯಿಂದ ಪ್ರತಿಭಟನೆ

300x250 AD

ಯಲ್ಲಾಪುರ: ರಾಜ್ಯ ಸರಕಾರದ ವಿರುದ್ಧ,ರಾಜೀವ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಆದ ಅವ್ಯವಹಾರದ ವಿರುದ್ದ ವಜ್ರಳ್ಳಿ ಗ್ರಾಮ ಪಂಚಾಯತ ಮುಂದೆ ಬಿಜೆಪಿ ಪಕ್ಷ ಯಲ್ಲಾಪುರ ಮಂಡಳ ವತಿಯಿಂದ ಪ್ರತಿಭಟಿಸಲಾಯಿತು.

ಪಕ್ಷದ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಗ್ರಾಮ ಪಂಚಾಯತ್ ಸದಸ್ಯರಾದ ಜಿ.ಆರ್. ಭಾಗ್ವತ್ ರಾಜ್ಯ ಸರಕಾರ ಗ್ರಾಮಪಂಚಾಯತವನ್ನು ಕಡೆಗಣಿಸಿದ ಬಗ್ಗೆ ‌ಮಾಹಿತಿ ನೀಡಿದರು. ಉಮೇಶ ಭಾಗ್ವತ ಮಾತನಾಡಿ ರಾಜ್ಯ ಸರಕಾರದ ವೈಫಲ್ಯ, ಪಂಚಾಯತ ವಿಕೇಂದ್ರೀಕರಣ ವ್ಯವಸ್ಥೆ ಬಗ್ಗೆ ಅಗೌರವ ದ ಬಗ್ಗೆ ‌ಮಾತನಾಡಿದರು.

ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ ಪಂಚಾಯತ ಸಿಬ್ಬಂದಿ ಕೊರತೆ ಮತ್ತು ರಾಜೀವ ಗಾಂಧಿ ವಸತಿ‌ ಯೋಜನೆ ಅಡಿಯಲ್ಲಿ ಮನೆ ಹಂಚಿಕೆ, ಅವ್ಯವಹಾರ, ಸಂಧ್ಯಾ ಸುರಕ್ಷಾ ಯೋಜನೆ ಸ್ಥಗಿತ ಬಗ್ಗೆ ಮಾತನಾಡಿದರು. ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಮಾತನಾಡಿ ಪಂಚಾಯತ ಮಟ್ಟದ ಆರೋಗ್ಯ ಕೇಂದ್ರ ಅವ್ಯವಸ್ಥೆ, ಕಳೆದ 2 ವರ್ಷಗಳಿಂದ ಈ ಹಿಂದೆ ಬಿಡುಗಡೆ ಆದ ಮನೆಗಳಿಗೆ ಹಣ ಮಂಜೂರ ಆಗದೇ ಇರುವ ಕುರಿತು ಮಾತನಾಡಿದರು,

300x250 AD

ಈ ಸಂಧರ್ಭದಲ್ಲಿ ಯಲ್ಲಾಪುರ ದ ಜನಾನುರಾಗಿಯಾದ ವೈದ್ಯರ ವರ್ಗಾವಣೆ ವಿರೋಧ ಖಂಡಿಸಿ ತಾಲ್ಲೂಕಿನ ಪ್ರತಿ ಗ್ರಾಮಪಂಚಾಯತ ಮಟ್ಟದಲ್ಲಿ ಸಹಿ ಸಂಗ್ರಹ ಅಭಿಯಾನ ಪ್ರಾರಂಭಿಸಲಾಯಿತು.

ಜಿಲ್ಲಾ ಪದಾಧಿಕಾರಿಗಳಾದ ವೆಂಕಟ್ರಮಣ ಬೆಳ್ಳಿ,ರೈತಮೋರ್ಚಾ ಅಧ್ಯಕ್ಷರಾದ ರಾಮಣ್ಣ ಚಿಕ್ಯಾನಮನೆ, ಶಕ್ತಿ ಕೇಂದ್ರ ಪ್ರಮುಖರಾದ ದತ್ತಾತ್ರೇಯ ಭಟ್ಟ,ಶ್ರೀಕಾಂತ್ ‌ಹೆಬ್ಬಾರ,ವಿ‌.ಎನ‌.ಭಟ್ಟ,ಮಹೇಶ ಗಾಂವ್ಕರ ಮತ್ತು ನವೀನ ಕಿರಗಾರೆ, ರಾಮಕೃಷ್ಣ ಭಟ್ಟ ಕಳಚೆ,ರಾಘವೇಂದ್ರ ಭಟ್ಟ,ಪಂಚಾಯತ ಉಪಾಧ್ಯಕ್ಷೆ ಗಂಗಾ ಭಟ್ಟ,ಪಂಚಾಯತ ಸದಸ್ಯರು, ಪಕ್ಷದ ಪ್ರಮುಖರು,ಸಾರ್ವಜನಿಕರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top